ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Sunday, July 4, 2010

ನೇಪಾಳದಲ್ಲಿ ಆದ ಒಂದು ಅನುಭವ



  ನೇಪಾಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೂರು ಸಂಗತಿಗಳು ನನ್ನ ಗಮನಕ್ಕೆ ಬಂದವುಮೊದಲನೆಯದುಮೆರವಣಿಗೆಗಳುಕಠ್ಮಂಡುವಿನಲ್ಲಿ ಎರಡೂವರೆ ದಿನಗಳ ಕಾಲ ತಂಗಿದ್ದ ನಾನು ಬೇರೆ ಬೇರೆ ಉದ್ದೇಶಕ್ಕಾಗಿ ನಡೆದ ಹಲವು ಮೆರವಣಿಗೆಪ್ರತಿಭಟನೆಗಳನ್ನು ನೋಡಿದೆಎರಡನೆಯದು ಭದ್ರತೆಯ ಕೊರತೆನನ್ನ ಗಮನ ಸೆಳೆದ ಮೂರನೇ ಸಂಗತಿಯೆಂದರೆ ನೇಪಾಳಿ ನಾಗರಿಕರಲ್ಲಿ ಚೀನಾದ ಕುರಿತು ಹೆಚ್ಚುತ್ತಿರುವ ಒಲವು.

ಮೊದಲ ಸಂಗತಿ ಅಷ್ಟೇನೂ ಪ್ರಮುಖವಲ್ಲಏಕೆಂದರೆ ನೇಪಾಳ ಇತ್ತೀಚೆಗಷ್ಟೇ ಉದಯವಾದ ಗಣ ತಂತ್ರಹೀಗೆ ಹೊಸದಾಗಿ ಉದಯವಾದ ರಾಷ್ಟ್ರಗಳಲ್ಲೆಲ್ಲಾ ಮೊದಮೊದಲಿಗೆ ಮೆರವಣಿಗೆಗಳುಪ್ರತಿಭಟನೆಗಳು ಇದ್ದರೂ ಕ್ರಮೇಣ ಕಡಿಮೆಯಾಗುತ್ತವೆಇನ್ನು ನನ್ನ ಗಮನಕ್ಕೆ ಬಂದ ಅಭದ್ರತೆಗೂ ಅಷ್ಟೊಂದು ಪ್ರಾಧಾನ್ಯತೆ ನೀಡಬೇಕಿಲ್ಲಏಕೆಂದರೆ ಇಂದು ಕಠ್ಮಂಡು ಮಾತ್ರವಲ್ಲ ನವದೆಹಲಿನ್ಯೂಯಾರ್ಕ್ ಅಥವಾ ಪ್ಯಾರಿಸ್ ಕೂಡಾ ಸುರಕ್ಷಿತವಲ್ಲಆದರೆ ಒಬ್ಬ ಭಾರತೀಯನಾಗಿ ನನ್ನನ್ನು ಬಹುವಾಗಿ ಕಾಡಿದ ಸಂಗತಿಯೆಂದರೆ ನೇಪಾಳೀಯರ ಮೇಲೆ ಹೆಚ್ಚುತ್ತಿರುವ ಚೀನಾದ ಪ್ರಭಾವ.

ಎರಡು ದಿನಗಳ ಅವಧಿಯಲ್ಲಿ ನಾನು ಗಮನಿಸಿದ ಪ್ರಕಾರ ನೇಪಾಳದ ದಿನಪತ್ರಿಕೆಗಳು ಚೀನಾದ ಕುರಿತ ಸುದ್ದಿಗಳ ಕುರಿತು ಪ್ರಗತಿಶೀಲ ನಿಲವು ತಳೆದರೆ ಭಾರತದ ಕುರಿತ ಯಾವುದೇ ವಿಷಯಕ್ಕೂ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿಲ್ಲಚೀನಾದ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದು ನನಗೆ ಸಂಪೂರ್ಣವಾಗಿ ಅರಿವಾಗಿದ್ದು ಅಲ್ಲಿನ  ಎಂಬಿಎ ವಿದ್ಯಾರ್ಥಿಗಳು ನಮ್ಮ ಲಾಡ್ಜಿನಲ್ಲಿ ಒಂದು ಚರ್ಚಾ ಕೂಟವನ್ನು ಏರ್ಪಡಿಸಿದ್ದರು..ನಾನು ದೂರದಿಂದ ಗಮನಿಸುತ್ತಿದ್ದೆ.ಸುಮಾರು ಎರಡು ಘಂಟೆಗಳ ಕಾಲ ಆ ಸಭೆ ನಡೆದಿತ್ತು..  ವಿದ್ಯಾರ್ಥಿಗಳ ಮತ್ತು ಸಂಪನ್ಮೂಲ ವ್ಯಕ್ತಿಗಳ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಒಂದು ವಿಷಯ ಮನದಟ್ಟಾಯಿತುಬಹುತೇಕ ವಿದ್ಯಾರ್ಥಿಗಳು ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಎಲ್ಲಾ ಮಾನದಂಡಗಳಲ್ಲೂ ಅಮೆರಿಕಕ್ಕಿಂತ ಚೀನಾ ತುಂಬಾ ಮುಂದಿದೆ ಎಂಬ ನಿಲುವು ತಳೆದಿದ್ದರುನನಗೆ ಇದು ಕೊಂಚ ವಿಚಿತ್ರವೆನಿಸಿತುಏಕೆಂದರೆ ಚೀನಾದ ಬಗ್ಗೆ ಈ ರೀತಿ ಚಿಂತಿಸುವ ವಿದ್ಯಾರ್ಥಿಗಳು ಭಾರತದಲ್ಲೂ ಇದ್ದಾರೆಆದರೆ ಭಾರತದಲ್ಲಿ 'ಅಮೆರಿಕ ಜಗತ್ತಿನ ಸೂಪರ್ ಪವರ್ ರಾಷ್ಟ್ರಸದ್ಯಕ್ಕೆ ಅದರ ಸ್ಥಾನ ಬದಲಾಗದುಎಂಬ ನಿಲುವಿನ ವಿದ್ಯಾರ್ಥಿಗಳ ಸಂಖ್ಯೆ ಚೀನಾಪರ ವಿದ್ಯಾರ್ಥಿಗಳಿಗಿಂತ ಎಷ್ಟೋ ಪಟ್ಟು ಹೆಚ್ಚಿನದಾಗಿರುತ್ತದೆಇನ್ನು ಬಹಳಷ್ಟು ಭಾರತೀಯರ ಪ್ರಕಾರ ಮುಂಬರುವ ಹಲವು ದಶಕಗಳಲ್ಲೂ ಅಮೆರಿಕ ನಂಬರ್ ಒನ್ ಸ್ಥಾನದಲ್ಲೇ ಇರುತ್ತದೆಏಕೆಂದರೆ ಚೀನಾದ ಅಭಿವೃದ್ಧಿಗೆ ಅಮೆರಿಕದ ಮಾರುಕಟ್ಟೆ ಅತ್ಯಗತ್ಯ.

ನಿಜಭಾರತ ಮತ್ತು ನೇಪಾಳ ನಡುವಿನ ಸಾಂಸ್ಕೃತಿಕ ಬಾಂಧವ್ಯಸೀಮಾಂತರ ವ್ಯಾಪಾರಪ್ರಾದೇಶಿಕ ಒಟ್ಟು ಅಭಿವೃದ್ಧಿ... ಈ ಎಲ್ಲಾ ಕಾರಣಗಳಿಂದ ಭಾರತೀಯರಿಗೆ ನೇಪಾಳದಲ್ಲಿ ಆದರದ ಸ್ವಾಗತ ದೊರೆಯುತ್ತದೆ.ನೇಪಾಳದಲ್ಲಿ ಭಾರತದ ಹೆಜ್ಜೆ ಗುರುತು ಎಷ್ಟರ ಮಟ್ಟಿಗಿದೆ ಎಂದರೆ ಅಲ್ಲಿ ಹೆಚ್ಚಾಗಿ ಬಳಕೆಯಾಗುವ ಭಾಷೆ ಹಿಂದಿ ಮತ್ತು ಅದಕ್ಕೆ ಹತ್ತಿರವಿರುವ ನೇಪಾಳೀ.. ಭಾರತೀಯ ಕರೆನ್ಸಿಯನ್ನು ಇಲ್ಲಿ ಮುಕ್ತವಾಗಿ ಸ್ವೀಕರಿಸಲಾಗುತ್ತದೆ (ನಕಲಿ ನೋಟಿನ ಭೀತಿಯಿಂದ 500ಹಾಗೂ 1000 ರೂಪಾಯಿಗಳನ್ನು ಸ್ವೀಕರಿಸಲು ಹಿಂದೇಟು ಹಾಕಲಾಗುತ್ತದೆ). ಜೊತೆಗೆ ಅಲ್ಲಿ ಉತ್ತಮವಾಗಿ ನಡೆಯುತ್ತಿರುವ ಎಲ್ಲಾ ಉದ್ಯಮಗಳೂ ಭಾರತೀಯರದ್ದೇ.

ಆದರೆ ನೇಪಾಳದಲ್ಲಿ ಅದರಲ್ಲೂ ಮಾವೋವಾದಿಗಳಲ್ಲಿಭಾರತ-ನೇಪಾಳ ಸಂಬಂಧದಿಂದ ನೇಪಾಳಕ್ಕೆ ನಷ್ಟ ಹಾಗೂ ಭಾರತಕ್ಕೆ ಹೆಚ್ಚಿನ ಲಾಭ ಎಂಬ ಬಲವಾದ ನಂಬಿಕೆಯಿದೆಇದನ್ನು ಆಡಳಿತಾರೂಢ ಸರ್ಕಾರ ಸಾರ್ವಜನಿಕವಾಗೇ ಪ್ರತಿಪಾದಿಸುತ್ತಿದೆಭಾರತದ ಕುರಿತ ನೇಪಾಳೀಯರ ಈ ನಿಲುವು ಮತ್ತಷ್ಟು ಬಲಿಯಲು ಚೀನಾ ಪ್ರತಿ ಅವಕಾಶವನ್ನೂ ಸೊಗಸಾಗಿಯೇ ಬಳಸಿಕೊಳ್ಳುತ್ತಿದೆಏಕೆಂದರೆ ನೇಪಾಳ ಆಯಕಟ್ಟಿನ ಸ್ಥಳದಲ್ಲಿರುವುದು ಚೀನಾಕ್ಕೂ ಗೊತ್ತುಹೀಗಾಗಿ ನೇಪಾಳೀಯರಿಗೆ ಚೀನೀ ಭಾಷೆಯನ್ನು ಕಲಿಸುವುದರ ಜೊತೆಗೆ ನೇಪಾಳಕ್ಕೆ ಅತ್ಯಗತ್ಯವಾಗಿರುವ ಮೂಲಸೌಕರ್ಯ ಅಭಿವೃದ್ಧಿಪಡಿಸಲೂ ಚೀನಾ ಮುಂದಾಗಿದೆಈಗಾಗಲೇ ಕಠ್ಮಂಡುವಿನಲ್ಲಿ ಮೂರು ಮೇಲ್ಸೇತುವೆಗಳನ್ನು ಚೀನಾ ನಿರ್ಮಿಸುತ್ತಿದೆ (ಪ್ರಸ್ತುತ ಕಠ್ಮಂಡುವಿನಲ್ಲಿ ಒಂದೇ ಒಂದು ಮೇಲ್ಸೇತುವೆ ಕೂಡಾ ಇಲ್ಲ). ಅತ್ತ ಭಾರತನೇಪಾಳ ಬಾಂಧವ್ಯ ತಣ್ಣಗೇ ಇದ್ದು ಅವು ತೆರೆಮರೆಯಲ್ಲೇ ಉಳಿದಿದೆ.

ಕಣ್ಣಿಗೆ ಕಾಣುವ ಬೃಹದಾಕಾರದ ಅಥವಾ ಮೇಲ್ಸೇತುವೆಯಂಥ ನಿರ್ಮಾಣಗಳು ಬಹು ಬೇಗನೆ ಜನರ ಮೆಚ್ಚುಗೆ ಗಳಿಸುತ್ತವೆ ಎಂಬುದರಲ್ಲಿ ಅನುಮಾನಗಳಿಲ್ಲಹಾಗಾಗಿ ನೇಪಾಳಕ್ಕೆ ಚೀನಾ ನೀಡುತ್ತಿರುವ ನೆರವುಗಳೆಲ್ಲವೂ ಕಣ್ಣಿಗೆ ಕಾಣುವಂಥದ್ದೇಇದು ಆರಂಭಿಕ ಹಂತದಲ್ಲಿದೆ ಎಂಬುದನ್ನು ಗಮನಿಸಬೇಕುಕುತೂಹಲಕಾರಿ ವಿಷಯವೆಂದರೆ ಕಳೆದ ಆರು ದಶಕಗಳಲ್ಲಿ ಭಾರತ ನೇಪಾಳದಲ್ಲಿ ರೂಪಿಸಿದ್ದೆಲ್ಲವನ್ನು ಚೀನಾ ತನ್ನ ಒಂದೆರಡು ಯೋಜನೆಗಳಿಂದ ಧ್ವಂಸ ಮಾಡುತ್ತಿವೆನೇಪಾಳದ ಆಯಕಟ್ಟಿನ ಸ್ಥಾನ ಗಮನಿಸಿದರೆ ಒಂದೆರಡು ಮೇಲ್ಸೇತುವೆಗೆ ಖರ್ಚಾಗುವ ಹಣದ ಪ್ರಮಾಣ ಕ್ಷುಲ್ಲಕ ಎಂಬುದು ಬಹುಶಃ ಚೀನಾಕ್ಕೆ ಮಾತ್ರ ಅರ್ಥವಾದಂತಿದೆ.
              ಇಂತಹ ಚರ್ಚೆಯನ್ನು ಗಮನಿಸಿ ನನಗೆ ಕುದಿಯತೊಡಗಿತು..ಒಂದು ಕಾಲದಲ್ಲಿ ಭಾರತವೇ ಆಗಿದ್ದ ಈ ಸ್ಥಳ ಇಂದು ನಮ್ಮ ವೈರಿಯಾದ ಚೈನಾದ ಜೊತೆ ನೇಪಾಳ ಕೈ ಜೋಡಿಸಿದರೆ ಭಾರತದ ಆಕ್ರಮಣಕ್ಕೆ ಇನ್ನೂ ಒಂದು ಮಾರ್ಗವೇನೋ ಎಂಬ ಸಂಶಯ ನನಗೆ..ಈಗಾಗಲೇ ಅರುಣಾಚಲಂ ನ  ಸ್ವಲ್ಪ ಭಾಗ ಚೈನಾಕ್ಕೆ ದಾನ ಮಾಡಿಯಾಯಿತು.. ಇನ್ನು ಮುಂದಕ್ಕೆ ನಮ್ಮ ದೇಶವನ್ನು ಉಳಿಸಿಕೊಳ್ಳಬೇಕಾದರೆ ಈ ಕ್ಷಣದಿಂದಲೇ ಯುವ ಶಕ್ತಿ ಜಾಗೃತವಾಗಬೇಕು. ಇದು ಅನಿವಾರ್ಯ ಪರಿಸ್ಥಿತಿ... 
       "ಈ ಬ್ಲಾಗ್ ಓದಿದ ಪ್ರತಿಯೊಬ್ಬ ಓದುಗನೂ ಈ ವಿಷಯದ ಬಗ್ಗೆ ಎಚ್ಚೆತ್ತು ತನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಯುವ ಶಕ್ತಿಯನ್ನು ಎಚ್ಚರಿಸಲಿ" ಎಂಬುದು ನನ್ನ ಹಾರೈಕೆ..
                   


                                                            ಜೈ ಭಾರತ್ ಮಾತಾ                           

Saturday, June 12, 2010

ಮಾನಸ ಸರೋವರ ಯಾತ್ರೆ -೨೬






              ನ್ಯಾಲಂನಿಂದ   ಬೆಳಗ್ಗಿನ ಉಪಾಹಾರ ಮುಗಿಸಿ ನಾವು ನೇಪಾಳಕ್ಕೆ ಹೊರಟೆವು.ದಾರಿಯಲ್ಲಿನ ಕಡಿದಾದ  ಭೀಕರ ರಸ್ತೆಯಲ್ಲಿ ಪ್ರಯಾಣಿಸಿ ಮಧ್ಯಾಹ್ನ ೧೨.೩೦ಕ್ಕೆ ಸಾಂಬಾ ಗಡಿ ತಲುಪಿದೆವು...  ಅಲ್ಲಿ ಲೈಟ್ ಫುಡ್ ಮುಗಿಸಿ ನೇಪಾಳಕ್ಕೆ ಹಿಂತಿರುಗುವ ಸಲುವಾಗಿ ನಮ್ಮ  ಪಾಸ್ಪೋರ್ಟ್ ಗೆ ಹಿಂತಿರುಗುವ ಅನುಮತಿಯನ್ನು ಚೀನಾ ದೇಶದಿಂದ ಪಡೆದು ಟಿಬೆಟ್ ದೇಶದ ಮಾರ್ಗವಾಗಿ ನೇಪಾಳಕ್ಕೆ ಬರುತ್ತಾ ಇದ್ದೆವು..                         

                                ಪ್ರಕೃತಿಯ ಮಡಲಲ್ಲಿ ಮನುಷ್ಯ ಎಂದಿದ್ದರೂ ಕುಬ್ಜನೇ. ಇನ್ನೂರು ಮುನ್ನೂರು ಅಡಿ ಎತ್ತರದ ಮರಗಳೂ ಕುಬ್ಜವೆನಿಸುವ ಬೆಟ್ಟಗಳ ಮುಂದೆ ನಾನೆಷ್ಟರವನು ?ನಾವೀಗ  ನೇಪಾಲದ  ಗಂಡಕೀ ನದಿಯ ತಟದಲ್ಲಿ  ಇದ್ದೇವೆ..  ಚಳಿಗಾಲದ ಮಂಜು ಕರಗಿ ನೀರಾಗಿ ಹರಿಯುವ ಈ ಸಮಯದಲ್ಲಿ ಜಲಪಾತಗಳ ರುದ್ರ ರಮಣೀಯತೆ ಕೈ ಬೀಸಿ ಕರೆಯುತ್ತದೆ. ಬೆಟ್ಟಗಳ ನೆತ್ತಿಯ ಮೇಲಿಂದ ಧುಮ್ಮಿಕ್ಕುವ ನೀರ ಧಾರೆಯ ಬಳಿ ಸಾರಿ ನಿಂತರೆ ಮೈಮನಕೆಲ್ಲ ಪನ್ನೀರ ಸಿಂಚನ. ಸಾವಿರಕ್ಕೂ ಮೀರಿ ಅಡಿಗಳ ಹಾರಿ ಕೆಳಗಿಳಿಯುವ ನೀರ ಹನಿ ನೋಡ ನೋಡುತ್ತ ಕಣ್ತುಂಬಿ ಎದೆಗೇ ಇಳಿದು ಬಿಡುತ್ತವೆ. ಜಲಪಾತದ ತುತ್ತ ತುದಿಯಲ್ಲಿ ಧುಮ್ಮಿಕ್ಕುವ ನೀರನ್ನೇ ದಿಟ್ಟಿಸುತ್ತಿದ್ದರೆ ಒಮ್ಮೊಮ್ಮೆ ಅಲ್ಲಿಂದ ನುಗ್ಗುವ ನೀರು ಇನ್ನೇನು ಮೈ ಮೇಲೆ ನುಗ್ಗಿ ನಮ್ಮ ಆಪೋಶನ ತೆಗೆದುಕೊಳ್ಳುವದೇನೋ ಅನಿಸಿ ದಿಗಿಲಾಗುತ್ತದೆ. ಬೀಳುವ ನೀರ ಧಾರೆಯಲ್ಲಿಯ ಚಿಕ್ಕ ಚಿಕ್ಕ ಪಾಕೆಟ್ಟುಗಳು ನಾ ಮುಂದೆ ತಾ ಮುಂದೆ ಎನ್ನುವಂತೆ ಧರೆಗಿಳಿಯುವದನ್ನು ನೋಡುವದೊಂದು ಹಬ್ಬ. ಧರೆಗಿಳಿದ ನೀರು ಕಲ್ಲುಗಳ ಮಧ್ಯೆ ರಭಸದಿಂದ ಹರಿಯುತ್ತದೆ. ಆಳವೇ ಇಲ್ಲದೇ ತನ್ನ ಒಳಗನ್ನೆಲ್ಲ ತೋರಿಸುತ್ತದೆ. ಪಾತ್ರ ಅಗಲವಾದಂತೆ ಶಾಂತವಾಗುತ್ತದೆ, ಗೂಢವಾಗುತ್ತದೆ...  
              ಮಧ್ಯಾಹ್ನ ೩.೩೦ರ ಸಮಯ.ನಾವು ಬಸ್ ನಲ್ಲಿ ನೇಪಾಲದ ಕಾಟ್ಮಂಡು ನಗರಕ್ಕೆ ಬರುತ್ತಿದ್ದೇವೆ..   ಕೆಲವೊಮ್ಮೆ ದಟ್ಟ್ಟ ಕಾಡು , ಕೆಲವೊಮ್ಮೆ ಹುಲ್ಲುಗಾವಲಿನಂತಹ ಬೆಟ್ಟಗಳ ನಡುವೆ ಸಾಗುವ ಕಾಲುದಾರಿಯಲ್ಲಿ ಸಾಗುವಾಗ ಆಗುವ ದಿವ್ಯ ಅನುಭೂತಿಯನ್ನು ಶಬ್ದಗಳಲ್ಲಿ ವಿವರಿಸುವುದು ಕಷ್ಟ . ಆಕಾಶಕ್ಕೆ ಚಾಚಿದಂತೆ ಇರುವ ಮರಗಳು , ಅವುಗಳನ್ನಶ್ರಯಿಸಿ ಬೆಳೆದಿರುವ ಪರಾವಲಂಬಿ ಸಸ್ಯಗಳು , ಸುಂದರ ಕಾಡು ಹೂಗಳು , ಪಕ್ಷಿಗಳ ಇಂಚರ , ಇವು  ಎಲ್ಲದರ ಜೊತೆಗೆ ಒಹ್ ...ಕುವೆಂಪು , ಕಾರಂತರ ..ಕಾಡಿನ ವರ್ಣನೆಯ ಸಾಕ್ಷಾತ್ಕಾರವಾಯಿತು ಎಂದನಿಸಿತು.ದಟ್ಟ ಕಾಡು... ಏರು ತಪ್ಪಲುಗಳು...ದಾರಿ ಮಧ್ಯೆ ಅಲ್ಲಲ್ಲಿ  ಹರಿವ ಗಂಡಕಿ ನದಿಯ ಜುಳು ಜುಳು ಝರಿಗಳು... ತಣ್ಣಗೆ ಬೀಸುವ ಗಾಳಿ ಎಲ್ಲವೂ ನಮ್ಮನ್ನು ಒಂದು ರೀತಿಯಲ್ಲಿ ಹುರುಪುಗೊಳಿಸುವುದರ ಜೊತಗೆ ತುಸು ಭಯವೂ ಆವರಿಸಿಕೊಳ್ಳುತ್ತಿತ್ತು...
            ಬಸ್ ನಲ್ಲಿ ಹೋಗುತ್ತಿರುವಾಗ ಪಾಂಡೆ ನೇಪಾಲದ ಬಗ್ಗೆ ವಿವರಣೆ ನೀಡುತ್ತಾ ಹೋದರು...ನೇಪಾಳವು ಕೃಷಿಪ್ರಧಾನ ದೇಶ. ದೇಶದ ೭೬% ಜನರು ಜೀವನಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಭತ್ತಗೋಧಿಕಬ್ಬು ಮತ್ತು ಸೆಣಬು ಮುಖ್ಯ ಬೆಳೆಗಳು. ಕೈಗಾರಿಕೆಗಳು ಕೃಷಿ ಉತ್ಪನ್ನಗಳನ್ನು ಸಂಸ್ಕರಿಸುವುದಕ್ಕೇ ಸೀಮಿತ. ಪ್ರವಾಸೋದ್ಯಮವು ದೇಶದ ಪ್ರಮುಖ ಆರ್ಥಿಕ ಚಟುವಟಿಕೆ. ನೇಪಾಳದ ಹೆಚ್ಚಿನ ಭಾಗವು ಪರ್ವತಪ್ರಾಂತ್ಯವಾಗಿರುವುದರಿಂದ ರಸ್ತೆ ಹಾಗೂ ರೈಲುಮಾರ್ಗಗಳ ನಿರ್ಮಾಣ ಕಠಿಣ ಮತ್ತು ಅತಿ ವೆಚ್ಚವುಂಟುಮಾಡುವುದಾಗಿದೆ. ೨೦೦೩ರಂತೆ ದೇಶದಲ್ಲಿ ಒಟ್ಟು ೮೫೦೦ ಕಿ.ಮೀ. ಉತ್ತಮ ರಸ್ತೆಗಳು ಹಾಗೂ ಕೇವಲ ೫೯ ಕಿ.ಮೀ. ರೈಲುಮಾರ್ಗವಿದ್ದಿತು. ಇದರಿಂದಾಗಿ ರಾಷ್ಟ್ರದ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ದೂರಸಂಪರ್ಕ ವ್ಯವಸ್ಥೆಯು ಬಹಳ ಕೆಳಸ್ತರದ್ದಾಗಿದೆ. ಆಧುನಿಕ ತಂತ್ರಜ್ಞಾನವು ದೇಶದ ಜನತೆಯನ್ನು ತಲುಪಿಲ್ಲ. ನೇಪಾಳವು ಹೊರರಾಷ್ಟ್ರಗಳ ಸಹಾಯಧನವನ್ನು ಬಹುಮಟ್ಟಿಗೆ ಅವಲಂಬಿಸಿದೆ. ಭಾರತ, ಅಮೆರಿಕಾ, ಜಪಾನ್ , ಇಂಗ್ಲಂಡ್, ಯುರೋಪಿಯನ್ ಒಕ್ಕೂಟಗಳು ಪ್ರಮುಖ ದಾನಿಗಳು. 
                             ನೇಪಾಳವು ವಿಶ್ವದ ಏಕೈಕ ಹಿಂದೂ ರಾಷ್ಟ್ರ. ದೇಶದ ಅಧಿಕೃತ ಭಾಷೆ ನೇಪಾಲಿ. ಉಳಿದಂತೆ ಮೈಥಿಲಿಭೋಜಪುರಿ ಮತ್ತು ಅವಧಿ ಭಾಷೆಗಳು ನುಡಿಯಲ್ಪಡುತ್ತವೆ. ನೇಪಾಳದಲ್ಲಿ ಪುರುಷರ ಸರಾಸರಿ ಆಯುರ್ಮಾನ ಮಹಿಳೆಯರಿಗಿಂತ ಹೆಚ್ಚು. ಇಡೀ ಪ್ರಪಂಚದಲ್ಲಿ ನೇಪಾಳವೊಂದರಲ್ಲಿ ಮಾತ್ರ ಈ ವಿದ್ಯಮಾನ ಕಂಡುಬರುತ್ತದೆ. ಸಾಂಸ್ಕೃತಿಕ ವಿಷಯಗಳಲ್ಲಿ ನೇಪಾಳವು ಟಿಬೆಟ್ ಮತ್ತು ಭಾರತವನ್ನು ಹೋಲುತ್ತದೆ. ಉತ್ತರದ ಹಿಮಾಲಯ ಪ್ರದೇಶದಲ್ಲಿ ಟಿಬೆಟ್ ಸಂಸ್ಕೃತಿಯ ಛಾಪು ಕಂಡುಬರುವುದು. ಉಳಿದಂತೆ ಎಲ್ಲಾ ಕಡೆ ಹಿಂದೂ ಸಂಸ್ಕೃತಿಯ ಗಾಢ ಛಾಯೆ ಇದೆ. ನೇಪಾಳವು ಭಾರತವನ್ನು ಬಹಳವಾಗಿ ಅವಲಂಬಿಸಿದೆ. ಆರ್ಥಿಕ ಸಹಾಯ , ತಂತ್ರಜ್ಞಾನ, ರಕ್ಷಣೆ ಇವುಗಳೆಲ್ಲವೂ ಹೆಚ್ಚಿನ ಪ್ರಮಾಣದಲ್ಲಿ ಭಾರತದಿಂದಲೇ ನೇಪಾಳಕ್ಕೆ ಒದಗಿದೆ.
                               ನಂತರ ಪ್ರಯಾಣದಲ್ಲಿ ಪರಸ್ಪರ ನಾವು ಸ್ವಲ್ಪ ಹರಟೆ ಹೊಡೆದು ಹಾಗೆ ನಿದ್ದೆಯ ಮಂಪರಿಗೆ ಜಾರಿದೆವು....ಸಮಯ ರಾತ್ರಿ ೯.೩೦ .ಕಣ್ತೆರೆದಾಗ ನಮ್ಮ ಬಸ್ ಕಾಟ್ಮಂಡುವಿನ ಸಾಮ್ರಾಟ್ ಹೋಟೆಲ್ ಎದುರು ನಿಂತಿತ್ತು... ಹೋಟೆಲ್ ನಮಗಾಗಿ ಬಿಸಿಯೂಟ ಕಾಯುತ್ತಿತ್ತು.ಅದನ್ನು ಕಂಡ ಕೂಡಲೇ ನಮಗೆ ಹಸಿವು ಇಮ್ಮಡಿಯಾಯ್ತು.ನಮಗೆ ಅಲ್ಲಿನ ಊಟ,ದಾಲ್  ಆಗ ರುಚಿಸದಿದ್ದರೂ ಆಗ ಹಸಿವಿಂದ ಎಲ್ಲವೂ ರುಚಿಯಾಗಿತ್ತು...ಏಕೆಂದರೆ ಅನ್ನ ಕಂಡು ಅಂದಿಗೆ ೨೨ ದಿವಸವಾಗಿತ್ತು..ಎಲ್ಲರೂ ಗಪ್-ಚುಪ್ ಅನ್ನದೇ ಊಟಮಾಡಿದರು..ನಮಗಾಗಿ ಕಾದಿರಿಸಿದ್ದ ರೂಮಿನತ್ತ ಹೆಜ್ಜೆ ಹಾಕಿದೆವು..

Saturday, February 6, 2010

ಮಾನಸ ಸರೋವರ ಯಾತ್ರೆ -೨೫





ಸದಾ ಗಿಜಿಗುಡುತ್ತಿರುವ  ರಸ್ತೆಯ  ಮೇಲೆ ಒಂದಲ್ಲ ಒಂದು ವಾಹನ ಹೋಗುತ್ತಲೇ  ಇರುತ್ತದೆ , ಎಲ್ಲಿಂದ ಎಲ್ಲಿಗೋ ಪ್ರಯಾಣ ಮಾಡುವಾಗ ಕಾರಿನ ವಿಂಡ್‌ಶೀಲ್ಡ್ ಮೂಲಕ ಮುಂದೆ ಹೋಗುವ  ವಾಹನವನ್ನು  ಹಿಂಬಾಲಿಸಿಕೊಂಡು ಹೋಗುವುದು  ಸುಲಭ ಅನ್ನಿಸುತ್ತದೆ . ರಸ್ತೆಯ ಪಕ್ಕದಲ್ಲಿ ಎಷ್ಟೊಂದು ವಾಹನಗಳು ನಮ್ಮ ಜೊತೆ ಸಹ ಪ್ರಯಾಣದಲ್ಲಿ ತೊಡಗಿ ಒಂದು ಕಮ್ಮ್ಯೂನಿಟಿ ಅಥವಾ ಒಂದು ಸಮೂಹ ಇದು ಅನ್ನೋ ಭಾವನೆಗಳ ಹಿಂದೇನೇ ನಾವೆಲ್ಲಿ ಹೋಗ್ತೀವೋ ಅವರೆಲ್ಲೋ ಅನ್ನೋ ಭಿನ್ನತೆ ಕೂಡಾ ಮನದಲ್ಲಿ ಹುಟ್ಟಿ ಬರುತ್ತದೆ . ಘಂಟೆಗಟ್ಟಲೆ ಪ್ರಯಾಣ ಮಾಡ್ತಿರುವಾಗ ಒಂದಲ್ಲ ಒಂದು ರೀತಿಯ ಆಲೋಚನೆಗಳು ಮನದಲ್ಲಿ ಹುಟ್ಟುತ್ತಲೇ ಇರುತ್ತವೆ  , ಆ ಆಲೋಚನೆಗಳು ನಮ್ಮನ್ನು ಅವುಗಳ ಲೋಕಕ್ಕೆ ಸಂಪೂರ್ಣವಾಗಿ ಕರೆದೊಯ್ಯದಂತೆ ವಾಸ್ತವಕ್ಕೆ  ಆಗಾಗ್ಗೆ ಹಿಡಿದು ಎಳೆಯುತ್ತಲೇ ಇರುತ್ತದೆ .

ಹೀಗೆ ಪ್ರಯಾಣದ ಹಳೆಯ,ಹೊಸ ಮುಖಗಳು ಮನಸ್ಸಿಗೆ ಬಂದದ್ದು ಸಗಾದಿಂದ  ಅದೆಷ್ಟೋ ದೂರವನ್ನು ಕ್ರಮಿಸಿ ರಸ್ತೆಯ ಮೇಲೆ ನಮ್ಮದೇ ಆದ ಒಂದು ಪ್ರಪಂಚವನ್ನು ತೆರೆದಿಟ್ಟುಕೊಂಡಾಗಲೇ. ನನ್ನ ಪ್ರಕಾರ ಪ್ರಯಾಣ ಅನ್ನೋದು ಒಂದು ರೀತಿ ಧ್ಯಾನ ಇದ್ದ ಹಾಗೆ, ರಸ್ತೆಯ ಮೇಲೆ ಡ್ರೈವ್ ಮಾಡ್ತಿರೋ ವ್ಯಕ್ತಿ ಭೌತಿಕವಾಗಿ ಅದೆಷ್ಟು ಕೆಲಸಗಳಲ್ಲಿ ತೊಡಗಿದ್ರೂ ಮನಸ್ಸು ಒಂದು ರೀತಿ ಹರಳು ಕಟ್ಟುತ್ತಾ  ಇರುತ್ತದೆ  ಅನ್ನುವುದು ನನ್ನ ಭಾವನೆ. ಆದರಿಂದಲೇ  ಪ್ರಯಾಣ ಅನ್ನುವುದು  ನಮ್ಮೊಳಗಿರುವ  ಆಲೋಚನೆಗಳಿಗೆ ಒಂದು ವೇದಿಕೆ ಕೊಟ್ಟು ಅವುಗಳ ಧ್ವನಿಯನ್ನು ಆಲಿಸುವುದಕ್ಕೆ ನಾವು ಕಲ್ಪಿಸಿಕೊಡುವ  ಒಂದು ಅವಕಾಶ ಆಗುತ್ತದೆ . ನಾವು ಕ್ರಮಿಸುವ  ದೂರ, ನಾವೇ ವಾಹನವನ್ನು ಚಲಾಯಿಸುತ್ತಿದ್ದೇವೋ ಇಲ್ಲವೋ ಎನ್ದುವುದು , ನಮ್ಮ ಜೊತೆ ಯಾರು ಯಾರು ಇದ್ದಾರೆ ಮುಂತಾದವುಗಳು ನಮ್ಮನ್ನು ಒಂದು ಹೊಸ ವ್ಯಕ್ತಿಯನ್ನಾಗಿ ಮಾಡಿಬಿಡಬಲ್ಲವು ಅನ್ನುವುದು   ನನ್ನ ನಂಬಿಕೆ. ಬೇರೆ ಯಾರೋ ಗಾಡಿ ಚಲಾಯಿಸಿ ಅದರಲ್ಲಿ ಕೂತಿರೋ  ಕಣ್ಣು ಮುಚ್ಚಿಕೊಂಡು ಹಾಗೇ ನಿದ್ರೆಯ ಮೋಡಿಗೆ ಜಾರಿ ಹೋಗಿ ಲೋಕವನ್ನು ಆ ಮಟ್ಟಿಗೆ ಸೊಗಸಿಲ್ಲಾ ಅಂತ ನಾನು ಹೇಳ್ತಾ ಇಲ್ಲ, ನಾವೇ ನಮ್ಮ ಗತಿಯನ್ನು ಬೇಕಾದ ಹಾಗೆ ಬದಲಾಯಿಸಿಕೊಂಡು ಎಲ್ಲೆಲ್ಲಿಗೆ ಎಷ್ಟೆಷ್ಟು ಹೊತ್ತಿಗೆ ಹೋಗಬೇಕು, ಹೋಗಬಾರದು ಎಂದು ನಿರ್ಧರಿಸಿಕೊಂಡು ಹೋಗುವುದರಲ್ಲಿ  ಬೇಕಾದಷ್ಟು ಸವಾಲುಗಳಿವೆ ಆ ಸವಾಲುಗಳ ನಡುವೆಯೂ ನಮ್ಮತನವನ್ನು ಕುರಿತು ಯೋಚಿಸುವುದಕ್ಕೆ  ಬೇಕಾದಷ್ಟು ಆಸ್ಪದ ಸಿಕ್ಕಿ  ಪ್ರತಿಯೊಂದು ಪ್ರಯಾಣದ ನಂತರ ನಾನಂತೂ ಒಂದು ಹೊಸದೊಂದು ಲೋಕದಲ್ಲಿ ಮುಳುಗೆದ್ದ ಹಾಗಿರುತ್ತೇನೆ  ಅನ್ನುವುದು  ನಿಜ.

ಆಗ ಸಂಜೆ ೫.೦೦ ಘಂಟೆಯ ಸಮಯ.  ಬಾನಂಗಳದಲ್ಲಿ ಸೂರ್ಯನು ಪಡುವಣದತ್ತ ಜಾರುತ್ತಿದ್ದನು.. ನೈಜತೆ ಎಷ್ಟೊ೦ದು ರೋಮಾ೦ಚಕಾರಿಯಾದ ವಿಷಯಗಳನ್ನು ನಮಗೆ ನೀಡಬಲ್ಲುದೆ೦ದರೆ ಕಲ್ಪನೆಯು ಅದಕ್ಕಿ೦ತ ಹೆಚ್ಚಿನದೇನೂ ಹೇಳಲಾರದು  


ಉದಯಾಸ್ತಮಾನಗಳ ನಡುವಿನ ಬೆಳಕಿನಾಟ ನಮ್ಮನ್ನು ರೋಮಾ೦ಚನಗೊಳಿಸುತ್ತದೆಯಾದರೂ, ಬೆಳಕಿನ ಬಗ್ಗೆ ಅರಿಯುವ ಕುತೂಹಲ, ಕ್ರಮಬದ್ಧವಾದ ಅಧ್ಯಯನದೆಡೆಗೆ ನಮ್ಮನ್ನು ಒಯ್ಯುವುದು ಬಹಳ ವಿರಳ. ಪಟ್ಟಕ ಒ೦ದನ್ನು ಸೂರ್ಯರಶ್ಮಿಗೆ ಒಡ್ಡಿದಾಗ ಮೂಡುವ ಏಳು ಬಣ್ಣಗಳಿಗೂ, ಕಾಮನ ಬಿಲ್ಲಿನ ಏಳು ಬಣ್ಣಗಳಿಗೂ ಸಾಮ್ಯತೆ ಇದೆಯೆ ಎ೦ಬುದನ್ನು ನಾವು ಯೋಚಿಸತೊಡಗಿದರೆ ವಿಜ್ಞಾನದ ಹಲವಾರು ರಹಸ್ಯಗಳು ನಮ್ಮ ಮು೦ದೆ ತೆರೆದುಕೊಳ್ಳಬಹುದು... ಆಗ  ಕಾಮನಬಿಲ್ಲಿನ ಏಳು ಬಣ್ಣಗಳು ನನಗೆ ಸ್ಪಷ್ಟವಾಗಿ ಕಾಣಿಸತೊಡಗಿದಾಗ ಮನಸ್ಸಿಗೆ ಆದ ಸಂತೋಷ ಅಷ್ಟಿಷ್ಟಲ್ಲ....  ಅಲ್ಲಿಯೇ ಕೂತುಬಿಡೋಣ ಅನ್ನುವಷ್ಟು ಸುಂದರ ರೀತಿಯಲ್ಲಿ ಕಾಮನಬಿಲ್ಲು ಗೋಚರಿಸತೊಡಗಿತು..ನಾವು ಕಾರಿನಿಂದ ಇಳಿದು ಮಂಜಿನಲ್ಲಿ ಸ್ವಲ್ಪ ನಡೆದೆವು. ಗುಡ್ಡದ ಒಂದು ತುದಿಯಲ್ಲಿ ಕಾಮನ ಬಿಲ್ಲು ಗೋಚರಿಸತೊಡಗಿತು.. ಕಣ್ಣು ಹಾಯಿಸಿದ ಕಡೆಗೆಲ್ಲ ಕಾಣುವ ಬಿಳುಪಾದ ಮಂಜಿನ ರಾಶಿ, , ಮೌನದಿಂದ ತುಟಿಬಿಗಿದುಕೊಂಡ ನೀರವ ಬೀದಿಗಳನ್ನು ನೋಡುತ್ತಾ ನಿಂತಾಗ, ಯಾವುದೋ ಅಲೌಕಿಕ ಶಕ್ತಿಯಾಂದು ಈಗಲೋ, ಇನ್ನೊಂದು ಕ್ಷಣಕ್ಕೋ ಈ ಭೂಮಿಯನ್ನು ಪ್ರವೇಶಿಸಿ ಬಿಡುವುದೇನೋ ಎಂಬ ಅನುಭವವಾಗುವುದು ಮಾತ್ರ ನಿಜ! ಈ ಅನಿಸಿಕೆ -  ಬೆಳ್ಳಿ ಬೆಟ್ಟದ ನಡುವೆ, ಬೆಣ್ಣೆ ಮುದ್ದೆಯಂತಹ ಮೋಡಗಳ ನಡುವೆ ಸಂಚರಿಸುವ ಸುಖಜೀವಿಗಳು ಎಂಬ ಕಥೆಗಳನ್ನು ಕೇಳಿ ಬೆಳೆದ ನನ್ನ  ಮನಸ್ಸಿನ ಭ್ರಮೆಯಿದ್ದರೂ ಇರಬಹುದೇನೋ? ಎಂದನಿಸಿತು...                                                                       

ಆ ಕ್ಷಣ ಕತ್ತಲೆಯಾಗತೊಡಗಿತು..ನನ್ನ ಮನಸ್ಸಿನ  ಶೂನ್ಯ ಭಾವಗಳಿಗೆ  ರೆಕ್ಕೆ ಪುಕ್ಕವನ್ನಿರಿಸಿ ಸಂತಸದ ಹಕ್ಕಿಯಾಗಿಸಿ ನನ್ನನ್ನು  ಒಂಟಿ ಮಾಡಿ ಕಾಮನಬಿಲ್ಲು ಮರೆಯಾಯಿತು.. ನಾವು ಕಾರಿನಲ್ಲಿ   ನೈಲಂನತ್ತ ಪ್ರಯಾಣ ಮಾಡುತ್ತಿದ್ದೆವು. ಸುಮಾರು ೧೫ ಕಿಲೋಮೀಟರ್ ಗಳಷ್ಟು ಪ್ರಯಾಣಿಸಿದಾಗ ನಮ್ಮ ಕಾರಿನ ಟಯರ್ ಪಂಕ್ಚರ್ ಆಯಿತು..ದಾರಿ ಮಧ್ಯದಲ್ಲಿ ನಮ್ಮ ಕಾರ್ ಮರಳಿನ ಮಧ್ಯದಲ್ಲಿ ಹೂತು ನಿಂತುಬಿಟ್ಟಿತ್ತು. ಎಷ್ಟು ಹೂತು ಬಿಟ್ಟಿತ್ತೆಂದರೆ ಟಯರಿನ ಮುಕ್ಕಾಲು ಪಾಲು ಮರಳಿನಲ್ಲಿ ಹೂತುಹೋಗಿತ್ತು..ಆಗ ಸುಮಾರು ರಾತ್ರಿ ೮.೩೦ ಘಂಟೆಯಾಗಿರಬಹುದು. ಹಿಮಮಿಶ್ರಿತ ಗಾಳಿ ಬಿರುಸಿನಿಂದ ಬೀಸುತ್ತಿತ್ತು.ಕಾರಿನಿಂದ ಹೊರಗೆ ಇಳಿಯುವ ಅವಕಾಶವೇ ಇರಲಿಲ್ಲ..ನಮ್ಮ ಸಹ ಚಾರಣಿಗರ ಕಾರುಗಳು ಸುಮಾರು ಮುಂದಕ್ಕೆ ಹೋಗಿದ್ದವು.ನಮ್ಮ ಡ್ರೈವರ್ ತುತೋಯಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸುತ್ತಿದ್ದ....ಕಾರಿನ ಗಾಜು ಸರಿಸಿ ನೋಡಿದರೆ ದೃಷ್ಟಿ ಹೋದಷ್ಟು ದೂರ ಕಗ್ಗತ್ತಲು.ನೀಲಿ ಆಕಾಶದಲ್ಲಿ ಹೊಳೆಯುವ ನಕ್ಷತ್ರ ಪುಂಜ. ಆ ಬೆಳಕೇ ನಮಗೆ ದಾರಿದೀಪ.ಚಳಿ,ಹಸಿವು,ಬಾಯಾರಿಕೆ  ಎಲ್ಲಾ ಒಟ್ಟೊಟ್ಟಿಗೆ ಆಯಿತು. ಚಳಿಯಿಂದ ನೀರನ್ನು ಕುಡಿಯಲು ಸಾಧ್ಯವಾಗಿಲ್ಲ.ಆದರೂ ನಮ್ಮ ಬ್ಯಾಗಲ್ಲಿದ್ದ ಅಲ್ಪ ಸ್ವಲ್ಪ ಡ್ರೈ ಫ್ರುಟ್ಸ್ ಗಳನ್ನೂ ತಿಂದೆವು..ಕಾರಿನಿಂದ ಹೊರಗೆ ಇಳಿದೆವು..ಒಂದು ತರಹದ ಭಯದ ವಾತಾವರಣ ನಿರ್ಮಾಣವಾಯಿತು..ನಮ್ಮ ಡ್ರೈವರ್ ಗಾಡಿಯನ್ನು  ನ್ಯೂಟ್ರಾಲ್  ಮಾಡಿ ನಮ್ಮ ಸಹಾಯ ಕೇಳಿದನು..ಆಗ ನಾವು  ಅಲ್ಲಿಂದ ಹೂತು ಹೋಗಿದ್ದ ಕಾರನ್ನು ತಳ್ಳಿ ಎಬ್ಬಿಸಿ  ಸುಮಾರು ೧೦ ಮೀಟರ್ಗಳಷ್ಟು ದೂರದಲ್ಲಿ ಯೋಗ್ಯವಾದ ಸ್ಥಳದಲ್ಲಿ ನಿಲ್ಲಿಸಿದೆವು..ವಾಹನದ ಮುಂದೆ ಬ್ರೇಕ್ ಲೈಟ್  ಹಾಕಿ ಡ್ರೈವರ್ನೊಡನೆ   ಹರಟೆ ಹೊಡೆಯುತ್ತಾ ನಮ್ಮ ಮೆಕ್ಯಾನಿಕ್ ಗಾಗಿ ಕಾಯುತ್ತಾ ಕುಳಿತೆವು..ಆದರೆ ಅವರು ಎಷ್ಟೊತ್ತಿಗೆ ಬರುತ್ತಾರೆಂಬ ಅರಿವು ನಮಗಿಲ್ಲ..ಎಷ್ಟು ದೂರದ ಪ್ರಯಾಣ ಇನ್ನು ನೈಲಮ್ ಗೆ ಇದೆ ಎಂದು ಗೊತ್ತಿಲ್ಲ.ನಿದ್ರೆ ಬರುತ್ತಿಲ್ಲ,ನಾವು ನಾಲ್ಕೂ ಜನ ಶಾಲುಗಳನ್ನು ಹೊದ್ದುಕೊಂಡು ಅಲ್ಲಿಯೇ ಮರಳಿನ ದಾರಿಯಲ್ಲಿ ಕೂತೆವು.ಮಾತನಾಡಲು ಅಥವಾ ಹಾಸ್ಯ ಚಟಾಕಿಗಳನ್ನು ಹಾರಿಸಲು ಯಾರಿಗೂ ಆಸಕ್ತಿಯಿರಲಿಲ್ಲ ...ಅಷ್ಟರಲ್ಲಿ ಹಿಮದ ಮಳೆ ಬೀಳಲು ಪ್ರಾರಂಭವಾಯಿತು...                              
              ಸಮಯ  ರಾತ್ರಿ.೧೦.೪೫ ...ಅಷ್ಟರಲ್ಲಿ ವಾಹನದ ದೀಪ ಕಾಣಿಸುತ್ತದೆ. ಆಗ ತಕ್ಷಣ ನಮ್ಮ ಡ್ರೈವರ್ ಕಾರಿನ ಲೈಟನ್ನು ಪ್ರಖರವಾಗಿ ಪ್ರಜ್ವಲಿಸುತ್ತಾನೆ. ಆ ಮೂಲಕ ಎದುರು ಬರುವ ವಾಹನಕ್ಕೆ ನಮ್ಮ ಉಪಸ್ಥಿತಿ ಗೋಚರಿಸುತ್ತದೆ..ನಂತರ ಟಯರ್ ಪಂಚ್ ಕೂಡಿಸಿ ಆದಾಗ ನಮ್ಮ ಕಾರ್ ಸ್ಟಾರ್ಟ್ ಚಳಿಯಿಂದ ಆಗಲೇ ಇಲ್ಲ.ಆಗ ನಮ್ಮ ಕಾರಿನಿಂದ ಆ ಕಾರಿಗೆ ಹಗ್ಗವನ್ನು ಕಟ್ಟಿ ನಮ್ಮನ್ನು ಆ ಕಾರಿನಲ್ಲಿ ಕುಳ್ಳಿಸಿ ಕರೆದುಕೊಂಡು ಹೋದರು..ಮುಂದಿನ ವಾಹನದಲ್ಲಿ ನಾವು ಪ್ರಯಾಣ ಮಾಡುತ್ತೇವೆ.ನಾವು ಈ ಹಿಂದೆ ಬಂದಿದ್ದ ಕಾರನ್ನು  ಈ ಕಾರಿನ ಮೂಲಕ ವೇಗವಾಗಿ ಎಳೆಯಲಾಗುತ್ತದೆ.ಅರಿಯದ ಸ್ಥಳದಲ್ಲಿ ಹೊಸ ಅನುಭವ.ಕೊರೆಯುವ ಚಳಿ,ಕಗ್ಗತ್ತಲೆಯ ವಾತಾವರಣ ಮುಂದೆ ಏನಾಗಬಹುದು?ಎಂಬ ಭಯದಲ್ಲಿ ನಾವು ಪ್ರಯಾಣ ಮಾಡುತ್ತಿದ್ದೇವೆ. ಹಾಗೇ ಸುಮಾರು ೧೫ ಕಿ.ಮೀ ಪ್ರಯಾಣ ಮಾಡಿದಾಗ ಅಲ್ಲಿ ನಮಗಾಗಿ ನಮ್ಮ ಸಹ ಚಾರಣಿಗರು ಕಾಯುತ್ತಿದ್ದರು.ಅವರು ತಡವಾದ ಕಾರಣವನ್ನು ನಮ್ಮಲ್ಲಿ ವಿಚಾರಿಸುತ್ತಾರೆ.ಎಲ್ಲಾ ವಿಷಯವನ್ನು ವಿಷದವಾಗಿ ತಿಳಿಸುತ್ತೇವೆ.
                                    ಆಗ ಸುಮಾರು ಮಧ್ಯರಾತ್ರಿ ೧.೦೦ ಘಂಟೆಯ ಸಮಯ. ಬೇರೆ ವಾಹನದ ಚಾಲಕರು ಸೇರಿ ನಮ್ಮ ಕಾರನೂ ರಿಪೇರಿ ಮಾಡಿದರು. ಮತ್ತೆ ಸುಮಾರು ೩೫ ಕಿ.ಮೀ ಗಳಷ್ಟು ದೂರದ ಪ್ರಯಾಣದಲ್ಲಿ ನಾವು ನೈಲಂ ತಲುಪುತ್ತೇವೆ.ಮಧ್ಯ ರಾತ್ರಿ ನಮಗೆ  ಅಲ್ಲಿ  ಉಪಹಾರಕ್ಕಾಗಿ ಬೇಯಿಸಿದ ಜೋಳವನ್ನು ನಮ್ಮ ಶೆರ್ಪಾಗಳು  ಇಟ್ಟಿದ್ದರು. ನಮ್ಮ ಹಸಿವು ನೀಗಿಸಿ ನಮಗಾಗಿ ಕಾದಿರಿಸಿದ ರೂಮಿನತ್ತ ಹೆಜ್ಜೆ ಹಾಕಿದೆವು..


Monday, January 4, 2010

ಮಾನಸ ಸರೋವರ ಯಾತ್ರೆ - ೨೪

ಭಾರತದೇಶದ ಎಲ್ಲಾ ಕುಟುಂಬಗಳು "ನಮ್ಮ ಮಕ್ಕಳು ಚೆನ್ನಾಗಿದ್ರೆ ಸಾಕು, ದೇಶಕಾಯೋ ಕೆಲಸ ನಮಗೆ ಯಾಕೆ ಬೇಕು !!!"
ಅಂದ್ರೆ ದೇಶ ಕಾಯುವ ಕೆಲಸ ಯಾರು ಮಾಡಬೇಕು?
ಬೇರೆ ದೇಶದವರಿಗೆ ಗುತ್ತಿಗೆ[out source]ಕೊಡಬೇಕೇ?

ನಮ್ಮಲ್ಲೇಕೆ ಪ್ರತಿಯೊಂದು ಕುಟುಂಬದಲ್ಲಿ ೧೬ ವರ್ಷ ತುಂಬಿದ ಗಂಡು- ಹೆಣ್ಣು ಮಕ್ಕಳು ಯಾವುದೇ ಜಾತಿ-ಮತ ಭೇದವಿಲ್ಲದೆ,
ಹಣದ ಅಂತಸ್ತಿನ ಭೇದವಿಲ್ಲದೆ ಕನಿಷ್ಠ ೧೦ ವರ್ಷ ಮಿಲಿಟರಿ ಶಿಕ್ಷಣಕ್ಕೆ ಒಳಪಟ್ಟು,
ಕನಿಷ್ಠ ಒಂದು ವರ್ಷ ದೇಶದ ಗಡಿ ಕಾಯುವ ಕೆಲಸ ಮಾಡಬೇಕೆಂದು ಸರ್ಕಾರ ಕಾನೂನು ಮಾಡಬಾರದು?
ಮಾಡಿದರೆ ಹೇಗಿರುತ್ತದೆ? ಇದರಿಂದ ದೇಶದ ಸಮಸ್ಯೆಯ ವಾಸ್ತವ ಸ್ತಿತಿ ಪ್ರತಿ ಭಾರತಿಯ ಕುಟುಂಬಕ್ಕೂ ಅರಿವಾಗಿ ನಾವು ನಿಜವಾದ ಭಾರತಿಯರಾಗುವುದಿಲ್ಲವೇ?

ಈಗಾಗಲೇ ಕೆಲವು ರಾಷ್ಟ್ರಗಳಲ್ಲಿ ಇದು ಜಾರಿಯಲ್ಲಿದ್ದು, ನಮ್ಮ ದೇಶ ದಲ್ಲಿ ಜಾರಿಗೆ ಬಂದರೆ ದೇಶಕ್ಕೆ ಅನುಕೂಲ ಅಲ್ಲವೇ?
ನಾನು ಕಂಡಂತೆ ಚೀನಾದಲ್ಲಿ ಪೋಲೀಸ್ ,ಕೋರ್ಟ್ ವ್ಯವಸ್ಥೆ ಇಲ್ಲ.

ಎಲ್ಲಾ ಕ್ಷೇತ್ರದಲ್ಲಿ ಮಿಲಿಟರೀ ತೀರ್ಮಾನ ಅಂತಿಮ..

ಅದೇ ರೀತಿ ನಮ್ಮಲ್ಲಿ ಪ್ರತಿಯೊಬ್ಬ ಭಾರತೀಯನೂ ಮಿಲಿಟರೀಯಲ್ಲಿ ಕನಿಷ್ಠ ಸೇವೆ ಸಲ್ಲಿಸಿದಲ್ಲಿ ನಮ್ಮ ದೇಶ ಎಂದೋ ಉನ್ನತ ಮಟ್ಟಕ್ಕೆ ತಲುಪಿಅನೇಕ ರೀತಿಯಲ್ಲಿ ಮಾದರಿಯಾಗುತ್ತಿತ್ತು ಅಲ್ಲವೇ?.


(ಚೈನಾ ಮಿಲಿಟರಿ ಅಧಿಕಾರಿ)





(ಚೈನಾದವರ ಜೊತೆ ನೆಹರು)

ದಾರ್ಚಿಂಗ್‌ನಲ್ಲಿ ನಾವು ನೇಪಾಳಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ನಮ್ಮ ಡ್ರೈವರ್ ತುತೋಯಿ ಜತೆ ಅಲ್ಲಿನ ಆಡಳಿತ ವ್ಯವಸ್ಥೆ ಬಗ್ಗೆ ಮಾತಾಡುತ್ತಿದ್ದೆವು.
ಅವನು ಚೀನಾದ ಬಗ್ಗೆ ನಮಗೆ ಅಲ್ಲಿನ ಭೂಪಟವನ್ನು ದಾರಿ ಮಧ್ಯದಲ್ಲಿ ಕಾರ್ ನಿಲ್ಲಿಸಿರುವಾಗ ವಿವರಣೆ ನೀಡುತ್ತಿದ್ದ.

ಅವನು ಟಿಬೆಟ್ ದೇಶದವನು.
ಅವನು ಅಲ್ಲಿನ ಮತ್ತು ಭಾರತದ ಸಂಬಂಧವನ್ನು ಹೇಳುತ್ತಿದ್ದ.
ಆಗ ನಮ್ಮ ದೇಶದ ಬಗ್ಗೆ ಎಂಥವರಿಗೂ ಪ್ರೇಮ ಉಕ್ಕಿ ಬರಬಹುದು.
ಟಿಬೆಟ್ ಚೀನಾ ಆಕ್ರಮಣ ಕಥೆಯನ್ನು ಕೇಳುವಾಗ ಮೈ ರೋಮಾಂಚನವಾಗುತ್ತದೆ.
ನಾವು ಆಗ ಟೆಬೆಟ್ ದೇಶದ ತವಾಂಗ್ ಎನ್ನುವ ಪ್ರದೇಶಕ್ಕೆ ಸಮನ್ಧಿಸಿದ ಸ್ಥಳದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು..
ಆಗ ಅಲ್ಲಿನ ಪ್ರದೇಶದ ಬಗ್ಗೆ ಅವನು ವಿವರಣೆ ನೀಡುತ್ತಿದ್ದ..
ತವಾಂಗ್'! ಇತ್ತೀಚಿಗೆ ಬಹಳ ಸುದ್ದಿ ಮಾಡುತ್ತಿದೆ. ದೆಹಲಿ-ಬೀಜಿಂಗ್ ಮಧ್ಯೆ ಉರಿಯುತ್ತಿರುವ ಬೆಂಕಿಗೆ 'ತವಾಂಗ್' ತುಪ್ಪ ಸುರಿಯುತ್ತಿದೆ. "ನೀವು - ಭಾರತೀಯರು ೧೯೬೨ ರ ಅನುಭವವನ್ನ ಮರೆತಿದ್ದಿರ!" ಅಂತ ಚೀನಿಗಳು ಬಹಿರಂಗವಾಗೇ ಹೇಳುವ ದಾರ್ಷ್ಟ್ಯ ತೋರುತಿದ್ದಾರೆ.

ಚೀನಿಗಳ ಬೆದರಿಕೆ ಬಗ್ಗೆ ಮಾತಡುವುದಕ್ಕಿಂತ ಮೊದಲು, ಏನಿದು 'ತವಾಂಗ್' ಅದಕ್ಕಾಗಿ ಯಾಕಿಷ್ಟು ಕಿತ್ತಾಟ? ಇದು ಯಾರಿಗೆ ಸೇರಿದ್ದು?
ಭಾರತೀಯರಿಗೋ? ಚೀನಿಗಳಿಗೋ? ಈ ಮೊದಲು ಇದು ಯಾರಿಗೆ ಸೇರಿತ್ತು? ಅಂತ ನೋಡ ಹೊರಟರೆ,
ಐತಿಹಾಸಿಕಾವಾಗಿ ಅಂದರೆ ೧೯೧೪ರಲ್ಲಿ ಬ್ರಿಟಿಷರು ಮೆಕ್-ಮಹೂನ್ ರೇಖೆಯನ್ನ ಗುರುತಿಸುವವರೆಗೂ ಅದು ಆಗಿನ 'ಟಿಬೆಟ್' ಗೆ ಸೇರಿತ್ತು.
೧೯೧೪ರಲ್ಲಿ ತವಾಂಗ್ ಅನ್ನು ೧೩ನೆ ಲಾಮ ಭಾರತಕ್ಕೆ ಬಿಟ್ಟು ಕೊಟ್ಟರು.ಆ ನಂತರ ಬಂದ ೧೪ನೆ ಅಂದರೆ ಈಗಿನ 'ದಲೈ ಲಾಮ' ಕೂಡ ತವಾಂಗ್ ಅನ್ನು ಭಾರತದ ಅಂಗವೆಂದೇ ಮಾನ್ಯ ಮಾಡಿದರು.
ಆದರೆ ೧೯೫೦ ರ ದಶಕದಲ್ಲಿ ಚೀನಿಗಳು 'ಟಿಬೆಟ್' ಅನ್ನು ಆಕ್ರಮಿಸಿಕೊಂಡರಲ್ಲ. ಈಗ ಅವರು ಹೇಳುವುದು ,
'ಒಂದು ಕಾಲದಲ್ಲಿ ತವಾಂಗ್ ಟಿಬೆಟ್ ಗೆ ಸೇರಿತ್ತು, ಈಗ ಟಿಬೆಟ್ ನಮಗೆ ಸೇರಿದೆ, ಹಾಗಾಗಿ ಈ ತವಾಂಗ್ ನಮಗೆ ಸೇರಬೇಕು' ಅಂತ

(ಅದರ ಜೊತೆಗೆ ಇರಲಿ ಅಂತ ಇಡಿ ಅರುಣಾಚಲ ಪ್ರದೇಶ ಕೊಡಿ ಅಂತಿದ್ದಾರೆ).
ಟಿಬೆಟ್ ಅನ್ನು ಚೀನಾ ಆಕ್ರಮಿಸಿಕೊಂಡಾಗ ವಿಶ್ವದ ರಾಷ್ಟ್ರಗಳೆಲ್ಲ ಚೀನಾ ತಪ್ಪು ಮಾಡಿದೆ ಅಂತ ವಿಶ್ವ ಸಂಸ್ಥೆಯಲ್ಲಿ ಮಾತಾಡ ಹೊರಟರೆ, ನೆಹರು ಅದು ಚೀನಿಗಳ ಆಂತರೀಕ ವಿಷಯ ನಾವು ಮಾತಾಡೋದೇ ತಪ್ಪು, ಸುಮ್ಮನೆ ಇರಿ ಅಂತ ಹೇಳಿದರು.! ಅಲ್ಲಿಗೆ ಟಿಬೆಟಿಯನ್ನರದು ಅರಣ್ಯ ರೋದನವಾಯ್ತು. ಮುಂದೊಂದು ದಿನ ಇದೆ ಟಿಬೆಟ್ ಅನ್ನು ಭಾರತದ ಮೇಲೆ ಸವಾರಿ ಮಾಡಲು ಚೀನಿಗಳು ಬಳಸಬಹುದು ಎನ್ನುವ ಸಾಮನ್ಯ ಜ್ಞಾನವು ನೆಹರು ಸೇರಿದಂತೆ ಯಾವ ನಾಯಕರಿಗೆ ಅನ್ನಿಸಲೇ ಇಲ್ಲ. ಟಿಬೆಟ್ ಅನ್ನು ಆಕ್ರಮಿಸಿದ ನಂತರ ಚೀನಿಗಳು, ಗಡಿಯುದ್ದಕ್ಕೂ ರಸ್ತೆ,ಬಂಕರ್ಗಳನ್ನ ನಿರ್ಮಿಸಿದರು, ಸೇನಾ ಜಮಾವಣೆ ಮಾಡಿದರು.
ಆದರೆ ನಮ್ಮ ಅಧಿಕಾರಿ ವರ್ಗ,ವಿರೋಧ ಪಕ್ಷ ಎಲ್ಲ ಎಲ್ಲರೂ ಧೀರ್ಘ ನಿದ್ರೆಯಲಿದ್ದರು. ಜನರಲ್ ತಿಮ್ಮಯ್ಯನಂತಹ ದಕ್ಷ ಮಿಲಿಟರಿ ಅಧಿಕಾರಿ ಮುಂದೆ ಇಂತ ಅನಾಹುತವನ್ನ ಊಹಿಸಿ ಮಿಲಿಟರಿ ಬಲಪಡಿಸ ಹೊರಟರೆ, ಅದಕ್ಕೆ ಅಡ್ಡಗಾಲು ಹಾಕಿದ್ದು ರಕ್ಷಣಾ ಮಂತ್ರಿ ಕೃಷ್ಣನ್ ಮೆನನ್!. ಈತನ ರಾಜಕೀಯದಿಂದ ಬೇಸತ್ತ ತಿಮ್ಮಯ್ಯ ರಾಜಿನಾಮೆ ಕೊಟ್ಟರು .ಅರೆ! ಈ ಕೃಷ್ಣನ್ ಮೆನನ್!ಯಾರು? ನಾನು ಇದುವರೆಗೂ ಆ ವ್ಯಕ್ತಿಯ ಹೆಸರು ಕೇಳಿರಲಿಲ್ಲ..
ನಮ್ಮ ದೇಶದ ಆಡಳಿತದ ಬಗ್ಗೆಯೂ ತುತೋಯಿ ಗೆ ಗೊತ್ತು ಅಂದಾಗ ನಮಗೆ ತುಂಬಾ ಖುಷಿಯಾಯಿತು..
ಅವನು ಭಾರತದ ಬಗ್ಗೆ ತಿಳಿದುಕೊಂಡಿದ್ದ! ನನಗೇ ನಾಚಿಗೆಯಾಯಿತು.. ನಮ್ಮ ದೇಶದಲ್ಲಿ ನಮಗಾಗಿ ನಮ್ಮ ನೆಲವನ್ನು ಉಳಿಸಲು ಹೋರಾಡಿದ ಜನರಲ್ ತಿಮ್ಮಯ್ಯನಂತಹ ಮೇರು ವ್ಯಕ್ತಿಯ ಬಗ್ಗೆ ಗೊತ್ತಿರಲಿಲ್ಲ.!!!

ಇನ್ನು ಜಾಗೃತವಾಗುತ್ತೇನೆ.!!!!!!!

(ಕಾಶ್ಮೀರ ಕದ್ದ ಚೀನಾ)

೧೯೮೧ರಿಂದಲೂ, ಚೀನಾ – ಭಾರತದ ಗಡಿ ವಿವಾದ ಚರ್ಚೆ ಈಗಲೂ ನಡೆಯುತ್ತಲೇ ಇದೆ.
ಈ ಮಾತುಕತೆ ಆಧುನಿಕ ದೇಶಗಳ ಇತಿಹಾಸದಲ್ಲೇ ಒಂದು ದಾಖಲೆ ನಿರ್ಮಿಸಿದೆ: ವಿಪರೀತ ವಿಳಂಬಕ್ಕಾಗಿ!
ಈ ಚರ್ಚೆಯ ಮೇಲೆ ಪೂರ್ಣ ಹಿಡಿತ ಸಾಧಿಸುವುದೇ ಚೀನಾದ ಕುತಂತ್ರ ಎಂದು ರಕ್ಷಣಾ ತಜ್ಞರು ಹೇಳುತ್ತಾರೆ.
ಚೀನಾದ ಬೇಡಿಕೆ ಸರಳ: ಅರುಣಾಚಲ ಪ್ರದೇಶದ ಕೇವಲ ಶೇ. ೨೮ರಷ್ಟು ಪ್ರದೇಶವನ್ನು ಕೊಟ್ಟರೆ ಸಾಕು.
ಇದು ಚೀನಾ ಇನ್ನೂ ನುಂಗಬೇಕಿರುವ ತೈವಾನ್ ದೇಶದ
ಗಾತ್ರಕ್ಕೆ ಸಮ ಅಂತ ಚೀನಾ ಹೇಳುವ ಮಾತು...!


"ಚೀನಾ ನಂಬಿ ಮೂರ್ಖರಾಗುವುದು ಬೇಡ..!!"
ಈ ಮಾತನ್ನು ತುತೊಯಿ ಪದೇ ಪದೇ ಹೇಳುತ್ತಿದ್ದ.. ಅವನಲ್ಲಿ ಚೀನಾದ ಬಗ್ಗೆ ಅಷ್ಟು ದ್ವೇಷ ಕುದಿಯುತ್ತಲಿತ್ತು...
ಅವನ ಭಾಷೆ ಟಿಬೆಟ್ ಆದರೂ ಅವನಿಗೆ ಅಲ್ಪ ಸ್ವಲ್ಪ ಇಂಗ್ಲಿಷ್ ಬರುತ್ತಿತ್ತು.
ಆದರೂ ಅವನ ಮುಖ ಚರ್ಯೆಯಿಂದ ಅವನ ಭಾಷೆ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.

ಮಧ್ಯೆ ಮಧ್ಯೆ ತುತೋಯಿ ಚೀನಾ ದೇಶದ ಬಗ್ಗೆ ಹಾಸ್ಯ ಮಾಡುತ್ತಿದ್ದ.
ಚೀನಾದವರು ಏಕೆ ಕ್ರಿಕೆಟ್ ಆಡುವುದಿಲ್ಲ?
ಚೀನಾ ದವರು ಕ್ರಿಕೆಟ್ ಆಡಿದರು ಅಂತ ಅಂದುಕೊಳ್ಳಿ..
ಅವರ opening batsman ಒಬ್ಬ ತುಂಬಾ ಚೆನ್ನಾಗಿ ಆಡುತ್ತಿದ್ದ ಅಂದುಕೊಳ್ಳಿ.
ಅವನನ್ನು ನಮ್ಮವರು ತುಂಬಾ ಕಷ್ಟಪಟ್ಟು out ಮಾಡಿದರು ಅಂತ ಅಂದುಕೊಳ್ಳಿ - ಅದಕ್ಕೇ ಅವರಿಗೆ ಕ್ರಿಕೆಟ್ ಆಡಲು ಐ ಸಿ ಸಿ ಯವರು ಅವಕಾಶ ಮಾಡಿಕೊಟ್ಟಿಲ್ಲ..!! :-)

(ಮರೆಯಲಾರದ ತುತೋಯಿ ಸಾಂಗತ್ಯ)

ಸಂಜೆ ೪.೦೦ ಘಂಟೆ..
ಆ ಸಮಯಕ್ಕೆ ಸೂರ್ಯನ ಕಿರಣಗಳು ಪರ್ವತ ಶಿಖರಗಳನ್ನು ಚುಂಬಿಸುತ್ತಿದ್ದವು.
ಅದೆಂತಹ ದೃಶ್ಯ!!
ಬಿಳಿಯ ಮಂಜು ಸೂರ್ಯನ ಆ ಪ್ರಥಮ ಕಿರಣಗಳಿಂದ ಹೊನ್ನಿನ ಬಣ್ಣಕ್ಕೆ ತಿರುಗಿ ಸುವರ್ಣ ಪರ್ವತಗಳಂತೆ ಕಾಣಿಸುತ್ತಿದ್ದವು.
ಇಂದಿಗೂ ಆ ದೃಶ್ಯಗಳು ಕಣ್ಣಿಗೆ ಕಟ್ಟಿದಹಾಗಿವೆ!
ಪ್ರಕೃತಿಯ ಚಲುವು ಇಲ್ಲಿ ಸೊಂಪಾಗಿದೆ - ಸೌಂದರ್ಯ ಸರಸ್ವತಿಯೇ ಧರೆಗಿಳಿದುಬಂದಂತೆ.
ಇದನ್ನು ನೋಡುತ್ತ ಅದೇನೋ ಒಂದು ತರಹದ ಶಾಂತಿ, ಸಮಾಧಾನದ ಮನೋಭಾವ!!!!!
ನಾವು ಆಗ ಸಗಾ ಎಂಬ ಪಟ್ಟಣಕ್ಕೆ ತಲುಪುತ್ತಾ ಇದ್ದೆವು.. ಆ ರಾತ್ರಿ ಇಲ್ಲಿ ವಿಶ್ರಾಂತಿ.
ಹಾಸಿಗೆ ಎಂಬುದನ್ನು ಕಾಣದೇ ಎಷ್ಟೋ ದಿನಗಳಾಗಿದ್ದವು... ರೂಮಿನಲ್ಲಿ ಚೈನೀ ಭಾಷೆಯಲ್ಲಿ ಲಘುಸಂಗೀತ ಕೇಳುತ್ತಲಿತ್ತು..
ಹಾಗೆಯೇ ಆ ಸಂಗೀತಕ್ಕೆ ನನ್ನ ದೇಹ ನಿದ್ರೆಯನ್ನಾವರಿಸಿತು.
ಕಣ್ಣೆರಡು ಮುಚ್ಚಿ ಹೊದಿಕೆಳೆದು ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ..
ನಮ್ಮ ಪ್ರಯಾಣ ಎಷ್ಟು ಮಧುರವಾಗಿತ್ತು ಎಂದರೆ, ಕಣ್ತೆರೆದರೆ ಸುಂದರ ಲೋಕ, ಮುಚ್ಚಿದರೆ ಸ್ವಪ್ನ ಲೋಕಕ್ಕೆ..

ನಾನು ಪಯಣ ಬೆಳೆಸುತಲಿದ್ದೆ...

Wednesday, December 30, 2009

ಮಾನಸ ಸರೋವರ ಯಾತ್ರೆ-೨೩

 
 
ಪ್ರತಿಯೊಬ್ಬರ ಮನಸ್ಸು ತನ್ನದೇ ಆದ ಲೋಕದಲ್ಲಿ ಅಲೆದಾಡುತ್ತ ತನ್ನಷ್ಟಕ್ಕೆ ತಾನು ಸಂತೃಪ್ತಿ ಹೊಂದಲು ಪರಿತಪಿಸುತ್ತಿರುತ್ತದೆ. ನಮ್ಮ ಚಿಂತನಾ ಪ್ರಪಂಚವೇ ನಮ್ಮನ್ನಾವರಿಸಿಬಿಟ್ಟಿರುತ್ತದೆ. ಎಷ್ಟೋ ಸಲ ನಮ್ಮಚಿಂತನಾ ಪ್ರಪಂಚ ಎಷ್ಟೊಂದು ಚಿಕ್ಕದೆಂಬುದರ ಪರಿವೇ ಇರುವುದಿಲ್ಲ. ನಮ್ಮ ಚಿಂತನಾ ಲೋಕವನ್ನು ಬಿಟ್ಟು, ಹೊರಗಿರುವ ಜಗತ್ತಿನ ಉದ್ದಗಲಗಳನ್ನು ಅಳೆಯುವ ಚಪಲ ಬಹಳ ದಿನಗಳಿಂದ ನನ್ನಲ್ಲಿತ್ತು. ಅವಕಾಶ ಸಿಕ್ಕಿರಲಿಲ್ಲ...ಇಂದು ಜೀವನದ ಧನ್ಯತೆ ಏನೆಂದು ಅರಿವಾಗುತ್ತಿದೆ..ಹೋದಲ್ಲೆಲ್ಲ ಹೊಸ ಹೊಸ ಅನುಭವ, ನನ್ನ ಜಗತ್ತು ಎಷ್ಟೊಂದು ಚಿಕ್ಕದೆಂಬ ನಾಚಿಕೆ ದಿನೇ ದಿನೇ ಹೆಚ್ಚುತ್ತ ಹೋಯಿತು. ಊಹಿಸಲಾರದಂತಹ ಸನ್ನಿವೇಷಗಳು ನನ್ನನ್ನು ದಿಙ್ಞೂಡನನ್ನಾಗಿಸಿಬಿಟ್ಟವು. ಉಳಿದವರಿಗಿಂತ ನಾನೆಷ್ಟು ಅದೃಷ್ಟವಂತನೆಂಬ ಅರಿವು ನನ್ನ ಚಿಂತನಾ ಲೋಕವನ್ನು ಬಡಿದೆಬ್ಬಿಸಿದ್ದು ಉಂಟು. ೨೨ ದಿನಗಳ ಅಲೆದಾಟ ಅವಿಸ್ಮರಣೀಯ....ಪ್ರತಿಯೊಬ್ಬ ಮನುಷ್ಯನೂ ಹುಟ್ಟಿನಿಂದಲೇ ಅನೇಕ ಗುಣಗಳನ್ನು ಬಳುವಳಿಯಾಗಿ ಪಡೆದುಕೊಂಡು ಬಂದಿರುತ್ತಾನೆ. ಮಗು ನಡೆಯೋದಕ್ಕೆ ಶುರು ಮಾಡ್ಬೇಕು ಅಂತಂದ್ರೆ, ತಾನೇ ಬೋರಲು ಬಿದ್ದೋ, ಅಂಬೆಗಾಲಿಟ್ಟೋ, ಮುಂದೆ ಎದ್ದು ನಿಂತು, ನಂತರ ಒಂದೊಂದೇ ಹೆಜ್ಜೆ ಇಟ್ಟು, ಎದ್ದು-ಬಿದ್ದು, ಗೋಡೆ ಹಿಡಿದು, ಇಲ್ಲಾ ಅಪ್ಪ ಅಮ್ಮನ ಕೈಬೆರಳನ್ನು ಹಿಡಿದೋ ನೆಡೆದು ಮುಂದೊಂದು ದಿನ ತನ್ನ ಕಾಲ ಮೇಲೆ ತಾನೇ ನೆಡೆಯುವಂತಾಗುತ್ತಾನೆ/ಳೆ. ಹಾಗೆಯೇ ಸೃಜನಶೀಲತೆ(ಕ್ರಿಯೇಟಿವಿಟಿ) ಕೂಡ. ಎಲ್ಲರಲ್ಲೂ ಒಂದಲ್ಲಾ ಒಂದು ತೆರನಾದ ಸೃಜನಶೀಲತೆ ಹುಟ್ಟಿನಿಂದಲೋ, ಬೆಳೆಯುತ್ತಾ ಹೋದಂತೆ ಮೈಗೂಡಿಸಿಕೊಂಡಂತೆಯೂ ಇರುತ್ತದೆ. ತನ್ನ ಸಾಮರ್ಥ್ಯವನ್ನು ಅರಿತು, ತಾನೇನು ಹೊಸತನ್ನು ಮಾಡಬಲ್ಲೆನು ಎಂದು ಗುರುತಿಸಿಕೊಳ್ಳುವವರೆಗೂ, ಆತ್ಮವಿಶ್ವಾಸದಿಂದ ಮುನ್ನೆಡೆದು ಏನನ್ನಾದರೂ ಮಾಡಿ ಸಾಧಿಸುವವರೆಗೂ ಮನುಷ್ಯನಿಗೆ ಅದರ ಅರಿವು ಇರುವುದೇ ಇಲ್ಲ....ಪ್ರಕೃತಿ ಮಾತೆಯೆಂಬ ಶಾಲೆಯಲ್ಲಿ ನಾವು ನಿರಂತರವೂ ವಿದ್ಯಾರ್ಥಿಗಳೇ..ಅನಂತವಾದ ಈ ಸೃಷ್ಟಿಯಲ್ಲಿ ಕೇವಲ ಕೆಲವೊಂದು ವಿಸ್ಮಯವನ್ನು ಪ್ರಕೃತಿಯಿಂದ ವಿಜ್ಞಾನ ಲೋಕಕ್ಕೆ ಸಂಬಂಧ ಪಡಿಸಿದಾಗ ನಮ್ಮ ಈ ಜಗತ್ತು ಎಂಥಹ ಅದ್ಭುತ !!!!!!!!!!ಸೂರ್ಯೋದಯ - ಸೂರ್ಯಾಸ್ತಗಳನ್ನು ಅನುಭವಿಸದವನುಂಟೇ? ನಮಗೇ ಇಷ್ಟೆಲ್ಲಾ ರೋಮಾಂಚನ, ಮುದ ನೀಡಬಲ್ಲ ಈ ಸೂರ್ಯೋದಯ ಸೂರ್ಯಾಸ್ತಗಳು, ಛಾಯಾಚಿತ್ರಗಾರರಿಗೆ, ಕವಿಗಳಿಗೆ ಎಷ್ಟು ಸೊಬಗಾಗಬಲ್ಲವು?ನಾವು ಆ ಸೂರ್ಯೋದಯದಲ್ಲಿ ದಾರ್ಚಿನ್ ನಿಂದ ಸುಮಾರು ೫ ಕಿಲೋ ಮೀಟರುಗಳಷ್ಟು ದೂರದ "ಅಷ್ಟಪಾದ " ಎನ್ನುವ ಒಂದು ಔಷಧೀ ಸಸ್ಯತೋಟಕ್ಕೆ ಚಾರಣ ಮಾಡಲು ಮುಂದಾದೆವು.ಅದು ಕೈಲಾಸ ಪರ್ವತದ ದಕ್ಷಿಣ ಭಾಗ..ಸುಮಾರು ಎರಡು ಗುಡ್ಡ ಹತ್ತಿದರೆ ಆ ಸ್ಥಳ ಸಿಗುತ್ತದೆ ಎಂದು ಪಾಂಡೆ ಹೇಳಿದರು. ಹಾಗೆ ಪಾಂಡೆಯವರ ಜೊತೆಗೆ ಹೆಜ್ಜೆ ಹಾಕಿದೆವು.ದಾರಿಯಲ್ಲಿ ನಮ್ಮಷ್ಟಕ್ಕೆ ಖುಷಿಯಿಂದ ತಮಾಷೆ ಮಾತುಗಳನ್ನಾಡುತ್ತಾ, ಕೈಲಾಸ ಪರ್ವತವನ್ನು ಹತ್ತಿರ,ಇನ್ನೂ ಹತ್ತಿರ,ಎಂದು ಹೇಳುತ್ತಾ ಆ ಔಷಧೀ ವನ ತಲುಪಿದ್ದು ತಿಳಿಯಲೇ ಇಲ್ಲ.ಆ ಪ್ರದೇಶಕ್ಕೆ ಕಾಲಿಟ್ಟೊಡನೆ ಆ ಪ್ರದೇಶವು ಸುಗಂಧಭರಿತವಾಗಿ ನಮ್ಮನ್ನು ಸ್ವಾಗತಿಸಿತು.ಎಲ್ಲರೂ ಆ ವನಗಳ ಮಧ್ಯೆ ಕುಳಿತೆವು.ಸುಮಾರು ೫೦ ಕಿ.ಮೀ.ಗಳಷ್ಟು ವಿಸ್ತೀರ್ಣವಿದೆ ಆ ಪ್ರದೇಶ. ಪುಷ್ಪಗಳಿಂದ ಅಲಂಕೃತವಾದ ಅಲ್ಲಿನ ಸಸ್ಯಗಳು ಎಲ್ಲವೂ ಒಂದು ಅಡಿಗಿಂತ ಹೆಚ್ಚು ಎತ್ತರವಿರಲಿಲ್ಲ.ಆ ಹಸಿರಿನ ಮೇಲೆ ಮೈ ಚಾಚಿ ,ಮೌನವಾಗಿ ಕುಳಿತಾಗ ಕೈಲಾಸ ಪರ್ವತವು ಸೂರ್ಯನ ಶಾಖದಿಂದ ವಿವಿಧ ರೂಪವನ್ನು ಪ್ರದರ್ಶಿಸುವುದು ತುಂಬಾ ವಿಸ್ಮಯವಾಗಿ ಕಂಡಿತು.ಅಲ್ಲಿಯೇ ಕುಳಿತು ಒಂದು ಘಂಟೆಯಷ್ಟು ಕಾಲ ಧ್ಯಾನ ಮಾಡಿದೆ.ತುಂಬಾ ಸಂತೃಪ್ತಿ ಭಾವನೆ ದೊರೆಯಿತು..ಅಂತಹ ಭಾವನೆಯನ್ನು ಕರುಣಿಸಿದ ಹಿಮಾಲಯಗಳ ಪ್ರಕೃತಿಗೆ ಕೃತಜ್ಞತೆಯನ್ನು ಸಲ್ಲಿಸಿದೆ.ನನ್ನ ಜೊತೆಗೆ ಬಂದಿದ್ದ ಕೆಲವು ಮಹಿಳಾ ಚಾರಣಿಗರು ಹೂವುಗಳನ್ನು ಹಾಗೂ ಅದರ ಬೀಜಗಳನ್ನು ಸಂಗ್ರಹಿಸಿದರು..ನನಗೆ ಅವುಗಳನ್ನು ಕೊಯ್ಯಲು ಮನಸ್ಸಾಗಲಿಲ್ಲ.ಅವುಗಳನ್ನು ಸ್ಪರ್ಶಿಸುತ್ತಾ ಅವುಗಳೊಡನೆ ಮಾತನಾಡಿದಂತೆ ಸಂತೋಷವನ್ನು ಅನುಭವಿಸಿದೆ.ಸ್ವಲ್ಪ ಹೊತ್ತಿನ ಆನಂದಕ್ಕಾಗಿ ಅವುಗಳನ್ನು ಕೀಳುವುದು ಅಸಮಂಜಸವೆಂದೂ, ಅನಗತ್ಯವೆಂದೂ ಕಂಡಿತು.ಅವುಗಳ ಮೂಲಕ ವಿಶ್ವಶಕ್ತಿ ಹೇರಳವಾಗಿ ದೊರೆಯಬಹುದು ಅಲ್ವೇ? ನಾನು ಒಂಟಿಯಾಗಿ ಅಲ್ಲಿ  ತಿರುಗುತ್ತಿದ್ದೆ..ಆಗ ನಮ್ಮ ಶೇರ್ಪಾ ನನ್ನನ್ನು ಕರೆದು ಇಲ್ಲಿ ಬನ್ನಿ ಎಂದನು.ಅಲ್ಲಿ ಒಂದು ಗಿದದಲ್ಲಿರುವ ಹೂವನ್ನು ಅದರ ವಾಸನೆ ನೋಡುವಂತೆ ಹೇಳಿದನು.ಹಾಗೆಯೇ ಮಾಡಿದೆ.ಆ ನಂತರ ಶ್ವಾಸ ಎಳೆಯುವಂತೆ ಹೇಳಿದನು.ಬಹಳ ದೀರ್ಘವಾಗಿ ಉಚ್ವ್ಹಾಸ ನಡೆಯಿತು.ಅದಕ್ಕೆ ಮುಂಚೆ ಯಾವಾಗಲೂ ಅಂತಹ ಅನುಭವ ಆಗಿರಲಿಲ್ಲ.ಹಾಗೆ ಎರಡು ಮೂರು ಬಾರಿ ಮಾಡಿದಾಗ ಹೊಟ್ಟೆ ಒಳಗೆ ಏನೋ ಖಾಲಿ ಆದಂತೆ ಆಯಿತು.ಹೊಸ ಶಕ್ತಿ ಧಾರೆಯೊಂದು ನನ್ನಲ್ಲಿ ಪ್ರವೇಶಿಸಿದಂತೆ ಅನಿಸಿತು.ಆಗ ನಮ್ಮ ಶೇರ್ಪಾ ಈ ಔಷಧೀ ವನದ ಬಗ್ಗೆ ಹೇಳಿದರು.ಇಲ್ಲಿ ಈಗ ನಿಮಗೆ ತೋರಿಸಿದಂತಹ ಇನ್ನೂ ಅನೇಕ ಅದ್ಭುತ ಔಷಧೀ ಸಸ್ಯಗಳಿವೆ.ಇದರ ಮಾಹಿತಿ ತಿಳಿದು ಉಪಯೋಗಿಸಿದರೆ ದೇಹ ಶುದ್ಧಿ,ಚಿತ್ತ ಶುದ್ದಿ ಸಹಜವಾಗಿ ಲಭಿಸುತ್ತದೆ. ವಿದೇಶದಿಂದ ಅನೇಕ ಸಸ್ಯ ಶಾಸ್ತ್ರಜ್ಞರು,ಔಷಧೀಯ ಸಸ್ಯಗಳಿಗಾಗಿಯೂ ,ಇಲ್ಲಿನ ವಿಶಿಷ್ಟ ಹೂಗಳಿಗಾಗಿಯೂ,ಎಲೆಗಳಿಗೆ ಲಕ್ಷಾಂತರ ರೂ.ಖರ್ಚು ಮಾಡಿಕೊಂಡು ಇಲ್ಲಿಗೆ ಬರುತ್ತಾರೆ..ಇಂತಹ ಅದ್ಭುತ ಪ್ರಕೃತಿ ತಾಣಕ್ಕೆ ನಮಿಸಿ ಅಲ್ಲಿಂದ ನಮ್ಮ ರೂಮಿಗೆ ಹೊರಡಲು ತಯಾರಾದೆವು.ಸಮಯ ಮಧ್ಯಾಹ್ನ ೩.೦೦ ಘಂಟೆ.ನಮ್ಮಲ್ಲಿದ್ದ ಬಿಸ್ಕೆಟ್ ಗಳನ್ನೂ ತಿಂದು ನೀರು ಕುಡಿದೆವು.ಎಲ್ಲರಿಗೂ ಬಹಳ ಹಸಿವಾನದಂತೆ ಕಾಣುತ್ತಿತ್ತು.ಎಲ್ಲರ ಕೈಯಲ್ಲಿದ್ದ ಬಿಸ್ಕೆಟ್ ಗಳು ಖಾಲಿಯಾಗಿದ್ದವು.ಎಲ್ಲರ ಮುಖದಲ್ಲಿ ಹಸಿವು ನೀಗಿದ ತೃಪ್ತಿಯಿತ್ತು. ಕೆಲವು ಫೋಟೋಗಳನ್ನು ತೆಗೆದೆವು..ಅಲ್ಲಿನ ಪ್ರಕೃತಿಗೆ ವಿದಾಯ ಹೇಳಿ ಹೊರಡಲು ತಯಾರಾದೆವು.ನನಗೆ ಒಂದು ಕ್ಷಣ ಹೀಗನ್ನಿಸಿತು."ನಾನು ಹಿಂತಿರುಗಿ ಹೋಗದೆ ಈ ಪ್ರದೇಶಗಲ್ಲಿ ಉಳಿದುಬಿಟ್ಟರೆ ಏನಾಗುತ್ತೆ?"ಈ ಪ್ರಶ್ನೆಯನ್ನು ನನ್ನನ್ನು ನಾನೇ ಕೇಳಿಕೊಂಡೆ.ಈ ಪ್ರಶ್ನೆ ನನ್ನನ್ನು ಬೆನ್ನಟ್ಟಿ ಕಾಡತೊಡಗಿತು.ಎಲ್ಲರೂ ಮುಂದೆ ನಡೆಯುತ್ತಿದ್ದರು.ಅವರಿಂದ ಅರ್ಧ ಕಿ.ಮೀ ಗಳಷ್ಟು ದೂರ ನಾನು ನಡೆಯುತ್ತಲಿದ್ದೆ.ಮತ್ತೆ ನಾನು ಒಂಟಿಯಾದೆ..ನನಗೆ ಹಾಗೆ ನಡೆಯುವುದೇ ಆನಂದವಾಗಿತ್ತು.ಆ ನಡಿಗೆಯಲ್ಲಿ ನನ್ನ ಜೀವನದ ಪರಿಶೀಲನೆ ,ಆತ್ಮ ಅವಗಾಹನೆಯಾಯಿತೋ ಎಂದನಿಸಿತು.,ಮತ್ತೆ ನಾನು ನನ್ನೂರಿಗೆ ಮರಳಬೇಕೆ? ಅಥವಾ ಹೋಗದಿದ್ದರೆ ನನ್ನ ಹೆತ್ತವರಿಗೆ ನಾನು ಕಾಣೆಯಾದ ವಿಷಯ ಹೇಗೆ ತಿಳಿಸುವುದು?ಎಂದೆಲ್ಲ ಗೊಂದಲವಾಯಿತು.ನಡೆಯುತ್ತಿರುವಂತೆ ನಾನು ಹೀಗೆ ಯೋಚನೆ ಮಾಡುತ್ತಿದ್ದೆ.ಹಿಮಾಲಯಗಳಲ್ಲಿ ವಿರಕ್ತಿ,ವೈರಾಗ್ಯ,ಬೇಗ ಸಿದ್ಧಿಸುತ್ತವೆ ಎಂಬ ಮಾತು ಕಥೆಗಳಲ್ಲಿ ಓದಿದ ನೆನಪು ನಿಜವೆನಿಸಿತು.ಯಾಕೆ ನನ್ನಲ್ಲಿ ಈ ಬದಲಾವಣೆ ಬಂತು? ನಮ್ಮ ತಂಡ ಕಣ್ಣಿಗೆ ಕಾಣದಷ್ಟು ದೂರ ಆಯಿತು.ಒಂದೆಡೆ ಭಯ, ಆತಂಕ ಏನು ಮಾಡುವುದೆಂದು ತಿಳಿಯದೆ ಅಲ್ಲೇ ಕುಳಿತೆ.ಸಮಯ ಸಂಜೆ ೫.೩೦ ಆಗಿತ್ತು.ಒಂದೆಡೆ ಚಳಿ ಗಾಳಿ.ಮತ್ತೊಂದೆಡೆ ನನ್ನ ಬಗ್ಗೆ ನನಗೆ ಸ್ಥಿಮಿತವಿಲ್ಲ..ಸಂಜೆ ಆಹ್ಲಾದಕರವಾಗಿತ್ತು.ಗಿಡಗಳ ಪೊದರುಗಳಲ್ಲಿ ಪಕ್ಷಿಗಳು ರಹಸ್ಯಗಳೇನನ್ನೋ ಹೇಳಿ ಕೊಡುವಂತಿತ್ತು...ಗಿಡಗಳು  ಗಾಳಿ ಬೀಸುವಾಗ ಅವುಗಳು ಅಲ್ಲಡುತ್ತಿರುವಾಗ ನಿನ್ನ ಮಾತನ್ನು ನಾವೂ ಕೇಳಿಸಿ ಕೊಳ್ಳುತ್ತಿದ್ದೇವೆ ಎನ್ನುತ್ತಾ ತಲೆದೂಗುತ್ತಿರುವಂತೆ ಅಲ್ಲಾಡುತ್ತಿದ್ದವು. ನಡೆಯುತ್ತಿದ್ದ ಕಾಲುಗಳೊಂದಿಗೆಸಂಬಂಧವೇ ಇಲ್ಲದಂತೆ ಮನಸ್ಸು ತನ್ನ ಕೆಲಸದಲ್ಲಿ ತೊಡಗಿತ್ತು. ಹೋಗದೆ ನನ್ನನ್ನು ಕುರಿತಾದ ಸಮಾಚಾರವನ್ನು ನನ್ನ ಮನೆಯವರಿಗೆ ತಿಳಿಸುವುದು ಹೇಗೆ?ಎಂಬ ಅನೇಕ ರೀತಿಯಲ್ಲಿ ಮನಸ್ಸು ಗೊಂದಲವಾಯಿತು.ಯಾವ ಪದ್ಧತಿಯಲ್ಲಿ ಕಳುಹಿಸಿದರೆ ,ಅವರಿಗೆ ನನ್ನ ಬಗ್ಗೆ ಯೋಚನೆ ಇಲ್ಲದೆ ನನ್ನನ್ನು ಮರೆತು ಹೋಗುತ್ತಾರೆ.?ಎಂಬ ಪ್ರಶ್ನೆಗೆ ಉತ್ತರ ಸಿಗದಾಗ ಇಲ್ಲಿಂದ ಹೊರಡುವುದೇ ಉತ್ತಮ ಎಂದು ಕಂಡಿತು.ಈ ಯೋಚನೆ ಬಹಳ ಚೆನ್ನಾಗಿ ಇದ್ದಂತೆ ಅನಿಸಿತು.ಹಾಗೆಯೇ ಮಾಡುತ್ತೇನೆ ಎಂದು ಸಂತೋಷವಾಗಿ ದೃಢವಾಗಿ ನಿಶ್ಚೈಸಿದೆ.ನನ್ನ ಸಂತೋಷ ನಡಿಗೆಯ ವೇಗವನ್ನು ಹೆಚ್ಚಿಸಿತು.ಬೆನ್ನ ಮೇಲಿದ್ದ ಬ್ಯಾಗಿನ ಭಾರ ಹಗುರವಾದಂತಹ ಫೀಲಿಂಗ್. ನನ್ನ ಸಹ ಚಾರಣಿಗರು ದಾರ್ಚಿನ್ ನಲ್ಲಿರುವ ರೂಮಿಗೆ ತಲುಪಿ ಅರ್ಧ ಘಂಟೆಯಲ್ಲಿ ನಾನೂ ತಲುಪಿದೆ. ಹಾಗಾಗಿ ಯಾರಿಗೂ ಸಂಶಯ ಬಂದಿರಲಿಲ್ಲ.ರಾತ್ರಿ ೮.೩೦ ಆಯಿತು.ಊಟ ಮುಗಿಸಿದೆವು.ಮಲಗಿದಾಗ ನಾನು ಮತ್ತೊಮ್ಮೆ ಈ ದಿವಸದ ಅನುಭವಗಲ್ಲು ಮೆಲುಕು ಹಾಕಿದೆ. ನನಗೆ ಸಂತೋಷದ ಅಥವಾ ನೆಮ್ಮದಿಯ ವಿಷಯ ಅಂದರೆ ಇಂದಿನಿಂದ ನನ್ನ ಬಳಿ ತ್ರಿಪ್ತಿಕರ ಉತ್ತರ ಇದೆ.ಈ ಉತ್ತರ ಕಂಡುಕೊಳ್ಳಲು ಪಟ್ಟ ಶ್ರಮವನ್ನು ನೆನೆಸಿಕೊಂಡಾಗ ನಿದ್ರಾ ದೇವತೆ ಪ್ರೇಮದಿಂದ ನನ್ನನ್ನು ತನ್ನ ಮಡಿಲಿನಲ್ಲಿ ಸೇರಿಸಿಕೊಂಡಳು...

Friday, December 11, 2009

ಮಾನಸ ಸರೋವರ ಯಾತ್ರೆ -22












ಆ  ದಿನ ಬೆಳಿಗ್ಗೆ ಎದ್ದಾಗ ಸುಮಾರು ಆರುವರೆ ಗಂಟೆಯಾಗಿತ್ತು. ನಮ್ಮ ಡೇರೆಯಲ್ಲಿ   ಗೊರಕೆ ಹೊಡೆದು ಎದ್ದ ನನಗೆ ಹೊರಗಿನ ಚಳಿಯ ಊಹೆ ಇರಲಿಲ್ಲ. ರಾತ್ರಿ ಮಲಗಿದ್ದ ಡ್ರೆಸ್ಸ್ ಹಾಗೆ ಇತ್ತು. ಎರಡು ಟೀ ಶರ್ಟ್, ಮೇಲೊಂದು ಸ್ವೆಟರ್, ತಲೆಗೆ ಮಂಕಿ ಟೋಪಿ, ಕಾಲಿಗೆ ಕಾಲು ಚೀಲ, ಕೈಗೆ ಕವಚ, ಇದೆಲ್ಲದರ ಮೇಲೆ ಬೆಚ್ಚಗಿರುವ ಸ್ಲೀಪಿಂಗ್ ಬ್ಯಾಗ್ ಜಿಪ್ ಎಳೆದುಕೊಂಡು ಕೇವಲ ಸ್ವಲ್ಪ ಮುಖ ಹೊರಗೆ ಕಾಣುವ ಹಾಗೆ ಮಲಗಿದ್ದ ಎಲ್ಲರಿಗೂ ನಿದ್ದೆ ಎನ್ನುವುದು ಮರದ ದಿಮ್ಮೆಯಂತೆ ಆಗಿತ್ತು. ಆರುವರೆಗೆ ಎದ್ದ ನಾವು,ಡೇರೆಯ  ಬಾಗಿಲು ತೆಗೆದರೆ ಸುಯ್ಯನೆ ಬಂತು ತಣ್ಣನೆಯ ಗಾಳಿ. ಹೊರೆಗೆ ಏನೂ ಕಾಣಿಸುತ್ತಿರಲಿಲ್ಲ, ಬಾಗಿಲ ಮೂಲಕ ಬಂದ ಗಾಳಿ ನಮ್ಮನ್ನು ಸೆಟೆದು ನಿಲ್ಲುವಂತೆ ಮಾಡಿತ್ತು. ಈ ರೀತಿಯ ಪರಿಸ್ಥಿತಿಯಲ್ಲಿ, ನಡೆಯುವುದು  ಅಸಾಧ್ಯವಾದ ಮಾತು. ನಮ್ಮ ನೈಸರ್ಗಿಕ ಕರೆಗಳನ್ನು ಮುಗಿಸಿಕೊಂಡು ಬಂದು, ಹಲ್ಲು ಉಜ್ಜಿ, ಮುಖ ತೊಳೆದುಕೊಂಡು ಬಂದು ಮತ್ತೆ ಬೆಚ್ಚಗಿನ ನಮ್ಮ ಉಡುಪುಗಳನ್ನು ಧರಿಸಿಕೊಂಡೆವು. ಸುಮಾರು ಏಳುಗಂಟೆ ನಲವತ್ತೈದು ನಿಮಿಷಕ್ಕೆ ಎಲ್ಲರೂ ಒಂದೆಡೆ  ತಲುಪಿ, , ಬ್ರೆಡ್-ಜಾಮ್ ಮತ್ತು  ಹೊಟ್ಟೆಗೆ ಇಳಿಸಿದೆವು. ನಮ್ಮ ದೊಡ್ಡ ಲಗೇಜನ್ನು ನಮ್ಮ ನಮ್ಮ ಯಾಕ್ ಗಳ ಬೆನ್ನಿಗೆ ಕಟ್ಟಲು  ರವಾನಿಸಿ ಅಗತ್ಯವಿದ್ದ ಕಡಿಮೆ ವಸ್ತುಗಳನ್ನು ನಾವು ಹೊತ್ತುಕೊಂಡು, ನಮ್ಮ ನೆರವಿಗೆ ಬೇಕಾದ ಕೋಲುಗಳನ್ನು ಹಿಡಿದು ಹೊರಟಾಗ ಸಮಯ ಒಂಬತ್ತು ಗಂಟೆ. ಆ ನಿಧಾನವಾಗಿ ನಮ್ಮ ನಡಿಗೆ ಶುರುವಾಯಿತು, ಹಿಂದಿನ ದಿನ ನಿತ್ಯ ಮಂಜಿನ ಪರ್ವತಗಳನ್ನು  ದಾಟಿ ಬಂದ ನಮಗೆ ಅಷ್ಟೊಂದು ದಟ್ಟವಾದ ಮಂಜು  ಕಾಣಿಸುತ್ತಿರಲಿಲ್ಲ. ನಡೆಯುತ್ತಾ ನಡೆಯುತ್ತಾ ಮಂಜು  ಕಡಿಮೆಯಾದಂತೆ ಕಾಣಿಸಿತು. ಸುಮಾರು ಒಂದು ಗಂಟೆಯ ಚಾರಣದ  ನಂತರ ಬಿಸಿಲು ಕಾಣಿಸತೊಡಗಿತು. ಹಾಗೆ ಬಿಸಿಲು ಜಾಸ್ತಿಯಾಯಿತು. ಮೈಮೇಲೆ ತೊಟ್ಟಿದ್ದ ಅಧಿಕ ಬಟ್ಟೆಗಳು ಒಂದೊಂದಾಗೆ ಕಳಚಿ ಬ್ಯಾಗನ್ನು ಸೇರತೊಡಗಿದವು. ಕೇವಲ ಎರಡು ಗಂಟೆಗಳಲ್ಲಿ ಹತ್ತು ಡಿಗ್ರಿಯಿಂದ ಸುಮಾರು ಮುವತ್ತು ಡಿಗ್ರಿ ತಾಪಮಾನಕ್ಕೆ ತಲುಪಿದ್ದೆವು. ಇಲ್ಲಿಂದ ಶುರುವಾಯಿತು ತಾಪತ್ರಯ. ಕೆಲವರಿಗೆ ಈ ತಾಪಮಾನದ ಬದಲಾವಣೆ ಸಹಿಸಲು ಆಗಲಿಲ್ಲ. ನಮ್ಮ ಗುಂಪಿನಲ್ಲಿ ಬಹಳ ಚುರುಕಿದ್ದ ಕೇಶವಣ್ಣ  ನಡೆಯಲಾಗದೆ ತನ್ನ ವೇಗವನ್ನು ಕಡಿಮೆ ಮಾಡಿದರು . ಎಲ್ಲರಿಗಿಂತ ಮುಂದಿರುತ್ತಿದ್ದವರು , ನಿಧಾನವಾಗಿ ಕೊನೆಯ ಸ್ಥಾನಕ್ಕೆ ಬಂದರು .ಆಗ ಅವರ ಅವಸ್ಥೆಯನ್ನು ಗಮನಿಸಿ ಶೇರ್ಪಾ ಅವರನ್ನು ಹೆಗಲ ಮೇಲೆ ಹಾಕಿಕೊಂಡು ವೇಗವಾಗಿ ನಡೆದರು..  ಅವರ  ಜೊತೆಗೆ ನಾನೂ ನಡೆದೆ. . ನನಗೆ ಇಂತಹ ಪರಿಸ್ಥಿತಿ ಬರಬಾರದು ಎಂದು ದೇವರಲ್ಲಿ ಮೊರೆ ಇಟ್ಟೆ..  ಮಧ್ಯಾಹ್ನ ೧೨.೩೦ ಕ್ಕೆ  ಚಾರಣಿಗರು   ದೂರದಲ್ಲಿ ಕಾಣುತ್ತಿದ್ದ ಒಂದು ವಿಶಾಲವಾದ ಬಯಲಿನಲ್ಲಿ  ಕುಳಿತು ತಮ್ಮ ತಮ್ಮ ಊಟದ ಪ್ಯಾಕೆಟ್‌ಅನ್ನು ಬಿಚ್ಚಿ ತಿನ್ನುತ್ತಿದ್ದರು. ನಾವು ಅಲ್ಲಿಗೆ ಹೋಗುವುದರೊಳಗೆ ಎಲ್ಲರೂ ಅವರವರ ಊಟವನ್ನು ಮುಗಿಸಿ ವಿಶ್ರಮಿಸುತ್ತಿದರು. ಸುಮಾರು ನಾಲ್ಕು ಗಂಟೆಯ ಪ್ರಯಾಣದ ನಂತರ ನಮಗೆ ಸಿಕ್ಕ ವಿಶ್ರಾಂತಿ ಅದಾಗಿತ್ತು. ನಾವೆಲ್ಲಾ ಬ್ರೆಡ್, ಕೇಕ್, ಹಣ್ಣಿದ್ದ ನಮ್ಮ ಊಟವನ್ನು ತಿನ್ನುತ್ತಿದ್ದರೆ, ಸುಸ್ತಾಗಿದ್ದ ಆ ಕೇಶವಣ್ಣ  ಹಾಗೆಯೆ ನೆಲದ  ಮೇಲೆ ಮಲಗಿದ್ದರು . ನಮ್ಮೆಲ್ಲರ ಒತ್ತಾಯದ ಮೇರೆಗೆ ಅವರು  ತಿನ್ನಲು ಶುರುಮಾಡಿದರು . ನಿಧಾನವಾಗಿ ಬಂದ ನಾವಷ್ಟೆ ಅಲ್ಲಿ ಉಳಿದುಕೊಂಡೆವು, ಉಳಿದವರು ನಡೆಯಲು ಶುರುಮಾಡಿದರು. ಬಹಳ ಸುಸ್ತಾಗಿದ್ದ ಕೇಶವಣ್ಣ  ನೋಡು ನೋಡುತ್ತಲೆ ತಿಂದಿದ್ದ ಎಲ್ಲವನ್ನು ವಾಂತಿ ಮಾಡಿಕೊಂಡರು . ಎಷ್ಟು ಸುಸ್ತಾಗಿದ್ದರೆಂದರೆ , ವಾಂತಿಮಾಡಿಕೊಳ್ಳುವಾಗ ಬಗ್ಗಲೂ ಅವರ ಲ್ಲಿ ಶಕ್ತಿ ಇರಲಿಲ್ಲ. ನನಗೆ  ಹೊರಡಲು ಹೇಳಿ ಗೈಡ್ ಮತ್ತು ನಮ್ಮ ಇಬ್ಬರು ಸಹ ಚಾರಣಿಗರು  ಅಲ್ಲೆ ಉಳಿದುಕೊಂಡರು. ನಾನು  ಅವರ  ಬಗ್ಗೆ ಯೋಚನೆ ಮಾಡುತ್ತಾ ನಿಧಾನವಾಗಿ ನಡೆಯುತ್ತಿದ್ದೆವು. ಸಣ್ಣ ಸಣ್ಣ ಗುಡ್ಡಗಳನ್ನು  ಹತ್ತಿ ಇಳಿಯುತ್ತಿದ್ದೆವು.  ನಿಧಾನವಾಗಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ, ಪ್ರತೀ ೧೦೦ ಮೀಟರಿಗೊಮ್ಮೆ  ನಾವು ಬಂದ ದಾರಿಯನ್ನು ನೋಡುತ್ತಿದ್ದೆವು. ಒಂದು ಕಡೆ ನಿಂತು ನೋಡುತ್ತಿದ್ದಾಗ ನಾಲ್ಕುಜನ ಬರುತ್ತಿರುವುದು ಕಾಣಿಸಿತು. ನಿಧಾನವಾಗಿಯಾದರೂ ಪರವಾಗಿಲ್ಲ, ಬರುತ್ತಿದ್ದಾರಲ್ಲ ಎನ್ನುವ ಸಮಾಧಾನದಿಂದ ನಾವು ಮುಂದುವರೆದೆವು..


 ಇನ್ನು ಸುಮಾರು 10 ಕಿಲೋ ಮೀಟರು ಗಳಷ್ಟು ಪ್ರಯಾಣ ಮಾಡಿದರೆ ನಮ್ಮ ಕೈಲಾಸ ಪರ್ವತದ ಪ್ರದಕ್ಷಿಣೆ ಮುಗಿಯುತ್ತದೆ. ಇಷ್ಟು ಬಂದವರಿಗೆ ಕೂಡಾ ನಮಗೆ ಇನ್ನುಳಿದ 10 ಕಿ.ಮೀ.ಚಾರಣ ಮಾಡುವುದು ತುಂಬಾ ಕಷ್ಟ... ಅಲ್ಲಿ ನಿಂತು ಕೆಲವು ಫೋಟೋ ಗಳನ್ನು ತೆಗೆಯುತ್ತಿದ್ದಾಗಲೇ ಶುರುವಾಯಿತು ಮಳೆ. ಮಳೆಗೆ ತಪ್ಪಿಸಿಕೊಳ್ಳಲು ಅಲ್ಲಿ ಎಲ್ಲೂ ಜಾಗವಿಲ್ಲ. ದೂರ ದೂರದವರೆಗೂ ಮರವಿಲ್ಲ, ಸೂರೆನ್ನುವ ಪದ ಕೂಡ ಹತ್ತಿರ ಸುಳಿಯುತ್ತಿರಲಿಲ್ಲ. ಇದ್ದ ಒಂದೇ ದಾರಿಯೆಂದರೆ  ನಾವು ಹಾಕಿದ ರೈನ್ ಕೋಟನ್ನು ಅಗಲವಾಗಿ ಬಿಡಿಸಿಕೊಂದೆವು..  ಆಕಾಶನೋಡುತ್ತಿದ್ದ ಬೆಟ್ಟ, ಈಗ ಪಾತಾಳ ನೋಡುತ್ತಿದೆ. ಮಳೆಗೆ ಕಲ್ಲುಗಳು ಜಾರುತ್ತಿವೆ ಇಂಥಹ ಪರಿಸ್ಥಿತಿಯಲ್ಲಿ ಜೋರಾಗಿ ಓಡುವುದು ಅಪಾಯವನ್ನು ಎಳೆದುಕೊಂಡಂತೆ. ಮಳೆಯಲ್ಲಿ ನೆನೆದರೆ ಒಂದು ತೊಂದರೆ ಬೇಗ ಓಡಿದರೆ ಇನ್ನೊಂದು ತೊಂದರೆ. ಬೇರೆ ದಾರಿ ಇಲ್ಲದೆ ಹರ ಸಾಹಸಮಾಡಿ ಬ್ಯಾಗಲ್ಲಿದ್ದ ಬ್ರೆಡ್ ಜ್ಯಾಮ್ ತಿಂದೆವು. . ಮಳೆ ಮತ್ತು ಚಳಿಗೆ ಕುಸಿದು ಹೋಗಿದ್ದ ಎಲ್ಲರೂ ನಡುಗುತ್ತಿದ್ದೆವು.  ಸಮಯ ಸಂಜೆ ೫.೦೦ ಘಂಟೆ.ಸುಮಾರು ಒಂದು ಘಂಟೆಯಷ್ಟು ವಿಶ್ರಾಂತಿಯ ಸಮಯ ...  ಚಳಿಗೆ ಎಲ್ಲರೂ ನಲುಗಿ ಹೋಗಿದ್ದರು. ಈ ಜಾಗಕ್ಕೆ ಬಂದ ದಿನ ನಾನು ಮುಖ ತೊಳೆಯಲು ಹೋಗಿ ನೀರು ಮುಟ್ಟಿದ್ದೆ.  ನೀರು ಹಾಕಿಕೊಂಡಾಗ ಅಂಥ ತೊಂದರೆ ಆಗಲಿಲ್ಲ, ಎರಡು ಮೂರು ಸಲು ನೀರು ಹಾಕಿಕೊಂಡೆ, ಮುಖ ಎನ್ನುವುದು ಹಾಗೆ ಮರಗಟ್ಟಿತ್ತು. ಕೈಗಳನ್ನು ಉಜ್ಜಿಕೊಂಡೆ ..  ಜೋರಾಗಿ ಉರಿಯತೊಡಗಿತು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಉರಿಯುತ್ತಿದ್ದ ಕೈ, ಬ್ರೆಡ್ ತಿಂದು ಗ್ಲೌಸ್  ಹಾಕುವ   ತನಕ ಸುಮ್ಮನಾಗಲಿಲ್ಲ. ಇದನ್ನು ಅನುಭವಿಸಿದ್ದ ನಾನು ಮತ್ತೆಂದು ಚಳಿಯಲ್ಲಿ ತಣ್ಣೀರಿನ ಜೊತೆಗೆ ಸರಸವಾಡಲಿಲ್ಲ. ನಮ್ಮ ಪ್ರಯಾಣ ಮುಂದುವರಿಯಿತು. ಸುಮಾರು ೨ ಕಿ.ಮೀ ದೂರದಷ್ಟು ನಡೆದಾಗ ವಿಶಾಲವಾದ ಬಯಲಿನಲ್ಲಿ ನಡೆಯುವ ಭಾಗ್ಯ ನನ್ನ ಕಾಲಿಗೆ ಒದಗಿ ಬಂತು.ಇನ್ನು ಕೇವಲ ೫ ಕಿಮೀ ದೂರ ನಡೆದರೆ ನಮ್ಮ ಚಾರಣ ಮುಗಿಯುತ್ತದೆ ಎಂದು ಪಾಂಡೆ ಹೇಳಿದಾಗ ನಮ್ಮಲ್ಲಿ ಏನೋ ಸ್ವಲ್ಪ ಸಮಾಧಾನ.ನನ್ನ  ಟಾರ್ಚ್ ಲೈಟಿನಲ್ಲಿ ಬ್ಯಾಟರೀ ಖಾಲಿಯಾಗಿ ದಾರಿಯೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ.ಒಬ್ಬರನ್ನೊಬ್ಬರು ಹೋದೆವು.   ನಮ್ಮ ನಡಿಗೆ ಬಹಳ ನಿಧಾನವಾಗಿದ್ದರಿಂದ ಅವರು ಬಂದಿದ್ದು ನಮಗೂ ಖುಷಿಯಾಯಿತು .  ದೂರದಲ್ಲಿ ಅಸ್ಪಷ್ಟವಾಗಿ ಸಾಲು ಸಾಲು ಬೆಳಕು ಕಾಣುತ್ತಿದ್ದವು ...ಹತ್ತಿರವಾಗುತ್ತಿದ್ದಂತೆಯೇ ಆ ಬೆಳಕು ಸ್ಪಷ್ಟವಾಯಿತು.ನಮ್ಮ ಕಾರುಗಳು ನಮ್ಮನ್ನು ಕರೆದುಕೊಂಡು ಹೋಗಲು ಕಾದಿದ್ದವು. ಡ್ರೈವರ್ ಗಳು  ನಮ್ಮನ್ನು ಕರೆದುಕೊಂಡು ಹೋಗಲು ಸುಮಾರು ೧.೫೦ ಕಿ.ಮೀ ಗಳಷ್ಟು ಮುಂದೆ ಬಂದರು. ನಮ್ಮ ಡ್ರೈವರ್ ತುತೋಯಿ ನಮ್ಮನ್ನು ಸ್ವಾಗತಿಸಿದ.ಎಲ್ಲರೂ ಸೇರಿ ಫೋಟೋ ತೆಗೆಸಿಕೊಂಡೆವು.ನಮ್ಮ ಡ್ರೈವರ್ ,ಶೇರ್ಪಾ ಹಾಗೂ ನನ್ನ ಜೊತೆ ಚಾರಣ ಮಾಡಿದ  ಉಷಾ,ಕೇಶವಣ್ಣ,ಕಿಶೋರ್ ಎಲ್ಲರೂ ಕಾರಿನತ್ತ  ನಡೆಯುತ್ತಾ ಹೋದೆವು. ಕಾರಿನಲ್ಲಿ   ದಾರ್ಚಿನ್ ನತ್ತ ಪ್ರಯಾಣ ಮಾಡಿದೆವು. ರೂಮಿಗೆ  ಬ೦ದವನೇ  ಕುಳಿತು ಎರಡು ಸ್ಪೂನ್‌ ನೀರು  ಕುಡಿದಿರಬೇಕು...... ತಲೆ ಧಿಮ್ಮೆ೦ದಿತು....... ಮೈ ತು೦ಬಾ ಬೆವರು! ತಲೆ  ಗಿರಗಿರ್ರನೇ ಸುತ್ತತೊಡಗಿತು. ವಾಂತಿ ಆಯಿತು. ಡಾಕ್ಟರ್ ಬಂದು ನನಗೆ ಔಷಧಿ  ಕೊಟ್ಟರು. ದೇಹ ನಿದ್ದೆ ಬಯಸುತ್ತಿದೆ, ಮನಸ್ಸು ಪೂರ್ತಿ ಕೈಲಾಸದಲ್ಲಿ ತೇಲಾಡುತ್ತಿದೆ  . ನಾನು ಊರಿಂದ  ಬಂದು ಇಂದಿಗೆ ೩೦ ದಿನಗಳಾದವು..ಈ ಮೂವತ್ತು  ದಿನಗಳ ಪ್ರತಿ ಘಳಿಗೆಯೂ ಅತ್ಯದ್ಭುತವಾಗಿ ಕಳೆಯಲ್ಪಟ್ಟಿವೆ.ನನ್ನ ಆನಂದಕ್ಕಿಂದು ಪಾರವೇ ಇಲ್ಲದಂತಾಗಿದೆ. ನನ್ನ ಈ ಸಂಭ್ರಮವನ್ನು.ಅಕ್ಷರಕ್ಕಿಳಿಸುವ ಒಂದು ಪುಟ್ಟ ಪ್ರಯತ್ನವಿದು.ಹಾಗೆ ನಿದ್ದೆಗೆ ಜಾರಿದೆ..









Sunday, December 6, 2009

ಮಾನಸ ಸರೋವರ ಯಾತ್ರೆ-೨೧

ಎಂಟು ಮಂದಿ ಮಲಗಬಹುದಾದ ಡೇರೆಯೊಳಗೆ ನಾವು ನಾಲ್ವರೇ ಆರಾಮವಾಗಿ ಬಿದ್ದುಕೊಂಡೆವು.
ನನಗಂತೂ ಎಲ್ಲೇ ಮಲಗಿದರೂ, ಎಷ್ಟೇ ಗಲಾಟೆಯಿದ್ದರೂ ನಿದ್ದೆ ಬೀಳುತ್ತದೆ. ಹೀಗಿರುವಾಗ ರಭಸವಾದ ಗಾಳಿ ಬೀಸಿ ರಾತ್ರಿ ಸುಮಾರು ೧೨ ಗಂಟೆಗೆ ಡೇರೆಯ ಹುಕ್-ಗಳು ಹಾರಿಹೋಗಿದ್ದವು. ಉಳಿದ ಮೂವರು ಅದನ್ನು ಸರಿಪಡಿಸಿ ಮಲಗಿದ್ದರು. ನನಗದು ಗೊತ್ತೇ ಆಗಲಿಲ್ಲ. ಆ ಪರಿಯ ಸುಖ ನಿದ್ರೆಯಲ್ಲಿದ್ದೆ ನಾನು. ಆದರೆ ಬೆಳಗ್ಗಿನ ಜಾವ ೩ ಗಂಟೆಗೆ ತಲೆಗೆ ಏನೋ ತಾಗುತ್ತಿರುವಂತೆ ಭಾಸವಾದಾಗ ಎಚ್ಚರವಾಯಿತು. ಗಾಳಿಯ ರಭಸಕ್ಕೆ ಡೇರೆಯ ಅಧಾರಕ್ಕಿರುವ ಸಣ್ಣ ರಾಡುಗಳು ಸಂಪೂರ್ಣವಾಗಿ ಬಗ್ಗಿ ತಲೆಗೆ ತಾಗುತ್ತಿದ್ದವು. ಆದರೂ ಹಾಗೇ ಮಲಗಿಕೊಂಡೆ. ನಮ್ಮ ಶೇರ್ಪಾ  ಮತ್ತೆ ಹೊರನಡೆದು ಎಲ್ಲವನ್ನು ಸರಿಪಡಿಸಿ ಬಂದರು.ಡೇರಾಪುಕ್ ನಲ್ಲಿ  
 ನಾವು ಇದೇ ಡೇರೆಯೊಳಗೆ ೧೦ ಜನರು ಮಲಗಿದ್ದರೆ ಇಲ್ಲಿ ನಾಲ್ಕೇ ಮಂದಿ! ಪ್ರಕೃತಿಯ ಮಡಿಲಲ್ಲಿ  ರಾತ್ರಿಯನ್ನು ಮನಸಾರೆ ಆನಂದಿಸಿದೆವು..
ಮರುದಿನ ಬೆಳಗ್ಗೆ ಗೌರೀ ಕುಂಡದತ್ತ ನಮ್ಮ ಚಾರಣ..







ನೂರಾರು ಕಿ. ಮೀ ವೇಗದಲ್ಲಿ ನುಗ್ಗಿ ಬರುವ ಗಾಳಿಗೆ ಒಂದು ಸಣ್ಣ ಒದ್ದೆಯಾದ ಮಂಜು (ವೆಟ್ ಸ್ನೋ) ಸಿಕ್ಕರೂ ಸಾಕು, ಉರುಳು (ರೋಲ್) ಹಾಕುತ್ತಾ ಎದುರಿಗೆ ಸಿಕ್ಕದ್ದನ್ನೆಲ್ಲಾ ಆಕ್ರಮಿಸಿಕೊಳ್ಳುತ್ತಾ ಮುನ್ನುಗ್ಗುವ ಹಿಮ ಬಿರುಗಾಳಿ ಒಂದು ಕಡೆ... ಮತ್ತೊಂದು ಕಡೆ ಹಿಮ ಪ್ರವಾಹ. ಕೆಲವೊಮ್ಮೆ ನಾವು ಮೇಲೇರುತ್ತಿರುವ ಸಂದರ್ಭದಲ್ಲಿ ಹಿಮಪ್ರವಾಹ ಅಪ್ಪಳಿಸುವುದುಂಟು. ಸಾಮಾನ್ಯವಾಗಿ ಪರ್ವತಕ್ಕೆ ಮುದ್ದೆಯಂತೆ ಹಿಮ ಅಂಟಿಕೊಂಡಿರುತ್ತದೆ. ಉಷ್ಣಾಂಶ ಏರಿಕೆಯಾಗುತ್ತಿದ್ದಂತೆ ಹಿಮ ಕರಗಬಹುದು. ಆದರೆ ಇದು ಬೀಳುವುದು ಗೊತ್ತಾಗುವುದಿಲ್ಲ. ನಮ್ಮಷ್ಟಕ್ಕೇ ನಾವು ಮೇಲೆ ಹತ್ತುತ್ತಿರುವಾಗ ಒಮ್ಮೆಲೆ ಅಪ್ಪಳಿಸಿದರೆ ಏನೂ ಮಾಡುವಂತಿಲ್ಲ. ಹಗ್ಗ ಹಿಡಿದು ಧೈರ್ಯದಿಂದ ಇದ್ದರೆ ಹೇಗೋ ಬಚಾವ್ ಆಗಬಹುದು.. ಹಿಮ ಬಿರುಗಾಳಿಗೂ ಅಷ್ಟೇ. ಅದರ ವೇಗಕ್ಕೆ ಆನೆ ಸಿಕ್ಕರೂ ಅದನ್ನು ಎತ್ತಿಕೊಂಡು ಸಾವಿರಾರು ಅಡಿಯ ಕೆಳಗಿನ ನೀರ್ಗಲ್ಲಿನ ಮೇಲೆ ಒಗೆದು ಬಿಡುತ್ತದೆ. ಬದುಕುವ ಮಾತು ಇನ್ನೆಲ್ಲಿಂದ ಬಂತು? ಎಂಥ ಗಟ್ಟಿಗನಿದ್ದರೂ, ಒಂದೇ ಸಮನೆ ಪರ್ವತ ಹತ್ತಿ ಬರುತ್ತೇನೆಂಬ ಹುಮ್ಮಸ್ಸಿದ್ದರೂ ಪ್ರಯೋಜನವಾಗದು.

ಅದಕ್ಕೇ  ನಾವು ನಿಸರ್ಗವನ್ನು ಧಿಕ್ಕರಿಸಲು ಹೋಗುವುದಿಲ್ಲ. ಪ್ರಕೃತಿಯೊಂದಿಗೆ ನಮ್ಮ ದೇಹ ಪ್ರಕೃತಿ ಹೊಂದಿಕೊಳ್ಳದಿದ್ದರೆ ಏನೂ ಸಾಧ್ಯವಾಗದು. ಆದ್ದರಿಂದಲೇ ದಿನಗಳ ಲೆಕ್ಕ ಹಾಕುತ್ತಾ ಹತ್ತಲು ಬಾರದು. ಪ್ರಕೃತಿಯೇ ಒಪ್ಪಿಗೆ ನೀಡುವವರೆಗೆ ಕಾಯಬೇಕು... ಕ್ರಾಂಪೋನ್ ಪಾಯಿಂಟ್ ಎಂಬುದೊಂದಿದೆ. ಅಲ್ಲಿಂದ ನಾವು ವಿಶೇಷವಾದ ಪಾದರಕ್ಷೆ (ಕ್ರಾಂಪೋನ್ ಬೂಟ್) ಧರಿಸಬೇಕು. ಬೂಟ್‌ಗೆ ಮೊಳೆಗಳಂಥ ಸಾಧನ ಅಳವಡಿಸಲಾಗಿರುತ್ತದೆ. ಅದರಿಂದ ಹಿಮವನ್ನು ಒದೆಯುತ್ತಾ ಹೆಜ್ಜೆ ಇಡಬೇಕು. ಹಿಮ ಕಂದಕಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಈ ಕ್ರಮ. ಕೆಲವೊಮ್ಮೆ ಭೂಮಿಯ ಶಾಖ ಮತ್ತು ಗಾಳಿಯ ಒತ್ತಡದಿಂದ ಉಂಟಾಗುವ ಬಿರುಕುಗಳು ಕಂದಕಗಳಾಗಿ ಮಾರ್ಪಡುತ್ತವೆ.
ಅದರ ಮೇಲೆ ಸುರಿಯುವ ಮಂಜು ಮುಚ್ಚಿಕೊಂಡರೆ ಏನೂ ಗೊತ್ತಾಗುವುದಿಲ್ಲ. 5 ಅಡಿಯಿಂದ 2 ಸಾವಿರದಡಿಯವರೆಗೂ ಆಳವಿರಬಹುದು. ನಾವು ಕ್ರಾಂಪೋನ್ಸ್‌ಗಳಿಂದ ಒದ್ದು ನೋಡದಿದ್ದರೆ ಗೊತ್ತಾಗದೇ ಈ ಕಂದಕಕ್ಕೆ ಬೀಳಬಹುದು. ನಾವು ಒದ್ದಾಗ ಅದರ ಶಬ್ದ ಅರಿವಿಗೆ ಬರುತ್ತದೆ. ಸಾಮಾನ್ಯವಾಗಿ ಟೊಳ್ಳಾದ ಜಾಗವಿದ್ದರೆ ಕಾಲಿಡುವುದಿಲ್ಲ. ಅಷ್ಟೇ ಅಲ್ಲ. ಹಿಮ ಕಂದಕಕ್ಕೆ ಬಿದ್ದರೆ ಶವ ಸಿಗುವುದೂ ಖಚಿತವಿಲ್ಲ. ಈ ಸೂಕ್ಷ್ಮತೆ ಅರಿವಿರದಿದ್ದರೆ ಕಷ್ಟ.


ಈ ಮಧ್ಯೆ ಆ ಚಳಿಯಲ್ಲಿ ಶೇರ್ಪಾ ದಂಪತಿಗಳು ಅವರ ಎಳೆ ಮಗುವಿನ ಆರೈಕೆ ಮಾಡುವುದು ನೋಡಿದಾಗ ಎಂತವರಿಗೂ ಹೃದಯ ಕರಗಬಹುದು.ಆ ಮಗುವಿಗೆ ಆಗಾಗ ಮೈ ಹುಷಾರಿಲ್ಲದಾಗ ನಮ್ಮ ಶೇರ್ಪಾ ಹೋಗಿ ಉಪಚರಿಸುತ್ತಿದ್ದ.ಆ ಮಗುವಿಗೆ ನಿದ್ರೆ ಹತ್ತಿದ ಮೇಲೆ ಸಂತೃಪ್ತಿ ಭಾವನೆಯೊಂದಿಗೆ ಬಂದು ನಮ್ಮ ತಂಡವನ್ನು ಸೇರುತ್ತಿದ್ದ. ಇಂತಹ ಕಠಿಣ ಚಾರಣದ ಸಮಯದಲ್ಲಿಯೂ ಅವರ ಮಾತೃ ವಾತ್ಸಲ್ಯ ಕಂಡು ನಾನೂ ಒಂದು ಕ್ಷಣ ಮಗುವಾಗಬೇಕು ಎನ್ನಿಸಿತು..
ನಾನು ಗೌರೀ ಕುಂಡಕ್ಕೆ ಬರುವುದಕ್ಕೂ ಈ ದೃಶ್ಯಕ್ಕೂ ಎಲ್ಲಿಯ ಅನುಬಂಧ? ನನ್ನ ನೆನಪು  ಒಂದು ಕ್ಷಣ ತಾಯಿ ಮಡಿಲಿಗೆ ಹೋಯಿತು.ನನ್ನ ಅಮ್ಮನೂ ನನ್ನನ್ನು ಹೀಗೇ ಎತ್ತಿರಬಹುದೇ?ತಾಯಿ ಬಗ್ಗೆ  ವರ್ಣನೆ ಅಪರಿಮಿತ.  ಭಾರತದ ವೈಶಿಷ್ಟ್ಯವೆಂದರೆ ನದಿ, ಬೆಟ್ಟ, ಪರ್ವತ, ನಿಸರ್ಗವನ್ನೂ ಮಾತೆಯೆಂದೇ ಆರಾಧಿಸಲಾಗುತ್ತದೆ. ಮನುಕುಲದ ಅಭ್ಯುದಯಕ್ಕೆ, ವಿಕಾಸಕ್ಕೆ ಕಾರಣೀಭೂತಳಾದ ಈ ತಾಯಿಯನ್ನು ನೆನೆಯಲು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ...

13,100 ಮೀಟರ್ ಎತ್ತರದಲ್ಲಿರುವ ಕ್ಯಾಂಪ್ ಒಂದಕ್ಕೆ ಹೋಗಬೇಕೆಂದರೆ ಮಧ್ಯದಲ್ಲಿ ಸಿಗುವ ಹಿಮಗೋಡೆ (ಐಸ್‌ವಾಲ್) ದಾಟಬೇಕು. ಬಹಳ ಎಚ್ಚರಿಕೆಯಿಂದ ಈ ಗೋಡೆಯನ್ನು ದಾಟಿ ಆ ಬದಿಗೆ ಹೋದರೆ ನಾರ್ತ್‌ಕೋಲ್. ಇದಕ್ಕೆ 8 ಗಂಟೆ ತಗುಲಿತು. ಜೋರಾದ ಗಾಳಿ ಬೀಸುತ್ತಿತ್ತು. ಒಂದು ಕಡೆ ಟೆಂಟ್ ಕಟ್ಟಿದಾಗ ಗಾಳಿ ನುಂಗಿ ಹಾಕಿತು. ಸ್ವಲ್ಪ ಹೊತ್ತು ಸುಮ್ಮನಾಗಿ ಬೇರೆ ಜಾಗ ಹುಡುಕಿ ಶಿಬಿರ ನಿರ್ಮಿಸಿ ಅಲ್ಲಿಯೇ ಉಳಿದು ಹೋಗೋಣ ಎಂದು ಪಾಂಡೆ ಹೇಳಿದರು.. ಕ್ಯಾಂಪ್‌ನಿಂದ ನಮ್ಮ ಹೊರೆಯನ್ನು ನಾವೇ ಹೊರಬೇಕು. ಸ್ವಲ್ಪ ಶೆರ್ಪಾ ಸಹಾಯ ಮಾಡಬಲ್ಲ. ಆದರೆ ಅವರಿಗೆ ಹೊರಿಸುವಂತಿಲ್ಲ. 40 ಕೆ. ಜಿ. ಯಷ್ಟು ಭಾರವನ್ನು ಹೊತ್ತು ಒಂದು ಹೆಜ್ಜೆ ಇಡಬೇಕೆಂದರೂ ಪ್ರಾಣ ಹೋದಂತಾಗುತ್ತದೆ. ಆದರೆ ಅಂಥದ್ದನ್ನು ಹೊತ್ತುಕೊಂಡೇ ದಿನಕ್ಕೆ ಕನಿಷ್ಠ 12 ರಿಂದ 14 ಕಿ. ಮೀ ನಡೆಯಬೇಕು. ನಾನು ಕ್ಯಾಂಪ್ ಒಂದಕ್ಕೆ ಹೋದ ದಿನ ಅದೃಷ್ಟ ಚೆನ್ನಾಗಿತ್ತು.


ಗಾಳಿ ಸ್ವಲ್ಪ ಜೋರು ಬಿಟ್ಟರೆ ಬೇರೇನೂ ಇದ್ದಿಲ್ಲ. ಅಲ್ಲಿಯೇ ಹವಾಮಾನ ಹೊಂದಾಣಿಕೆಗೆ (ಅಕ್ಲಮಟೈಸೇಷನ್) ಉಳಿದುಕೊಂಡೆ. ಒಮ್ಮೊಮ್ಮೆ ಅಲ್ಲಿ ಸಿಕ್ಕಾಪಟ್ಟೆ ಕೋಲ್ಡ್ ಅಥವಾ ಹಿಮ ಸುರಿಯುವಿಕೆ ಇದ್ದರೆ ಇರಲಾಗದು. ಹೋದ ತಪ್ಪಿಗೆ ಕ್ಯಾಂಪ್ ನಿರ್ಮಿಸಿ ಅಡ್ವಾನ್ಸ್‌ಡ್ ಬೇಸ್‌ಕ್ಯಾಂಪ್‌ಗೆ ವಾಪಸು ಬರಬೇಕು. ಬರುವಾಗ 8-10 ಗಂಟೆ ಬೇಕಾಗಿಲ್ಲ. ಆದರೂ ಬಹಳ ಜಾಗ್ರತೆಯಾಗಿ   ಇಳಿಯಬೇಕು. ಆಯ ತಪ್ಪಿದರೆ ಅನಾಹುತ ತಪ್ಪಿದ್ದಲ್ಲ. ಆಗ ಕಂಡಿತು ಗೌರೀ ಕುಂಡ... ಅದು ಸ್ಪಟಿಕದಂಥ ಶುಭ್ರ ನೀರು.. ನೀರು ಹಾಗೆಯೇ. ಅಷ್ಟೆಲ್ಲಾ ತಣ್ಣಗಿನ ಪ್ರದೇಶದಲ್ಲಿ ಹನಿ ನೀರಿಲ್ಲ. ಒಂದೇ ಒಂದು ಕಡೆ  ಕೊಳವಿದೆ. ಪಾರ್ವತೀ ದೇವಿಯ ಸ್ನಾನದ ಕೊಳ ಎಂದು ಪುರಾಣದ ಉಲ್ಲೇಖ.ಹಿಂದೂ ಭಕ್ತಾದಿಗಳು ಇಲ್ಲಿ ಪೂಜೆ ಮಾಡುತ್ತಾರೆ. ನಾನು ಈ ನೀರಿನಲ್ಲಿ ಕೈ ಇಡುತ್ತಿದಂತೆಯೇ  ಬೆರಳುಗಳೆಲ್ಲ ಮರಗಟ್ಟಿ ಹೋದವು.ಆದರೂ ಸ್ವಲ್ಪ ನೀರು ತೆಗೆದುಕೊಂಡು ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಂಡೆ.ದೂರದಿಂದ ಈ ಕೊಳವನ್ನು ನೋಡಿದಾಗ ಹಸಿರು ಬಣ್ಣದಿಂದ ವಿಚಿತ್ರವಾಗಿ ಕಾಣಿಸುತ್ತದೆ. ಹತ್ತಿರಕ್ಕೆ ಹೋಗಿ ನೋಡಿದರೆ ,ನೀರು ಮಾಮೂಲು ಆಗಿಯೇ ಇರುತ್ತದೆ.ಪಾರ್ವತೀ ದೇವಿ ಶಿವನನ್ನು ವಿವಾಹ ಮಾಡಿಕೊಳ್ಳಬೇಕೆಂದು ಈ ಸರೋವರದಲ್ಲಿ ತಪಸ್ಸು ಮಾಡಿದಳೆಂದೂ, ಪ್ರತೀ ದಿನವೂ ಈ ಕೊಳದಲ್ಲಿ ತನ್ನ ಕೋರಿಕೆಯನ್ನು  ನೆರವೆರಿಸಿಕೊಂಡಳು ಎಂದು ಪಾಂಡೆ ಈ ಗೌರೀ ಕುಂಡದ ಬಗ್ಗೆ ಮಾಹಿತಿ ನೀಡಿದರು..ಮನಸ್ಸಿನಲ್ಲಿ ಪಾರ್ವತೀ ದೇವಿಯನ್ನು ಪ್ರಾರ್ಥನೆ ಮಾಡಿದೆ.ಗೌರೀ ಕುಂಡದಿಂದ ತುಂಬಾ ಎತ್ತರಕ್ಕೆ ಹತ್ತಿ ಸುಮಾರು ೪ ಕಿಲೋಮೀಟರು ಗಳಷ್ಟು ದೂರ ಬಂದೆವು..










ನನ್ನ ಬ್ಯಾಗ್,ಊರುಗೋಲು,ಇವನ್ನೆಲ್ಲ ಎತ್ತಿಕೊಂಡು ನಡೆಯುವಾಗ ಮುಂಚೆ ಇದ್ದದಕ್ಕಿಂತ ಹತ್ತು ಪಟ್ಟು ಭಾರ ಜಾಸ್ತಿಯಾದಂತೆ ಅನಿಸಿತು. ಸಂಜೆ ೬.೦೦  ಘಂಟೆಯಾಯಿತು.ಈ ಜಾಗ ನನಗೆ ಒಂದು ದೇವ ಭೂಮಿ ಎಂದನಿಸಿತು, ನನ್ನ ಊಹೆಯಂತೆ ಕಂಡುದೆಲ್ಲಾ ವಾಸ್ತವವಾಗಿ ನಡೆಯಿತೆನ್ನಲು ಗೌರೀ ಕುಂಡದಿಂದ ೮೦೦ ಅಡಿಯಷ್ಟು ಎತ್ತರಕ್ಕೆ ಹತ್ತಿ ಬಂದಿರುವುದೇ ಆಧಾರ!!!!!!ನನ್ನ ಜನ್ಮ ಧನ್ಯವಾಯಿತು ಎಂಬ ವಿಶ್ವಾಸ ಬಂತು.. ಈ ರೀತಿಯ ಅನುಭವವನ್ನು ಕೊಟ್ಟಿದ್ದು ನನ್ನ ಹಿರಿಯರ ಹಾಗೂ ನನ್ನ ಗುರುಗಳ ಆಶೀರ್ವಾದ ಫಲವೇ?????ಹೀಗೆ ಭಾವನಾ ಲೋಕದಲ್ಲಿ ವಿಹರಿಸುತ್ತಾ ಮುಂದೆ ನಡೆಯುತ್ತಿದ್ದಾಗ   ಹಿಮದ ಗಾಳಿ ನಮ್ಮನ್ನು ನಮ್ಮ ಟೆಂಟ್  ನಲ್ಲಿ ಸ್ವಾಗತ ಮಾಡುತ್ತಿತ್ತು...